Advertisement

ಪಂಜಿಕಲ್ಲು : ಕೊಳವೆ ಬಾವಿ ಮರುಪೂರಣ ಪ್ರಾತ್ಯಕ್ಷಿಕೆ

02:05 AM Jul 17, 2017 | Team Udayavani |

ಬಂಟ್ವಾಳ: ಧ.ಗ್ರಾ.ಯೋಜನೆ ಬಂಟ್ವಾಳ ಹಾಗೂ ಗ್ರಾ.ಪಂ. ಪಂಜಿಕಲ್ಲು ಇದರ ಆಶ್ರಯದಲ್ಲಿ ಕೊಳವೆ ಬಾವಿ ಮರುಪೂರಣ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕರೆಂಕಿ ಜಿನ್ನಪ್ಪ ಅವರ ಕೃಷಿ ಜಮೀನಿನಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಸಿ. ರೋಡ್‌ ವಲಯಾಧ್ಯಕ್ಷ ಪುರುಷೋತ್ತಮ ಪೂಜಾರಿ ವಹಿಸಿದ್ದರು. ಧ.ಗ್ರಾ. ಯೋಜನೆ ಬಂಟ್ವಾಳ ತಾಲೂಕಿನ ಯೋಜನಾಧಿಕಾರಿ ಸುನೀತಾ ನಾಯಕ್‌ ಕಾರ್ಯಕ್ರಮ ಉದ್ಘಾಟಿಸಿ ಜಲಾನಯನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

Advertisement

ಧ.ಗ್ರಾ. ಯೋ. ಬಂಟ್ವಾಳ ತಾಲೂಕಿನ ಕೃಷಿ ಅಧಿಕಾರಿ ನಾರಾಯಣ ಕೆ. ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಇಂಗುಗುಂಡಿ, ಮಳೆ ಕೊಯ್ಲು, ಕೃಷಿ ಹೊಂಡ, ಕೊಳವೆ ಬಾವಿ ಮರುಪೂರಣಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪಂಜಿಕಲ್ಲು ಗ್ರಾ.ಪಂ. ಸದಸ್ಯ ಪೂವಪ್ಪ ಮೆಂಡನ್‌ ಮುಖ್ಯ ಅತಿಥಿಯಾಗಿ ಪಂಚಾಯತ್‌ನಿಂದ ರೈತರಿಗೆ ದೊರಕುವ ಸೌಲಭ್ಯಗಳ ಮಾಹಿತಿ ನೀಡಿದರು. ಪ್ರಗತಿಪರ ಕೃಷಿಕ ಜಿನ್ನಪ್ಪ ಪೂಜಾರಿ ಅನಿಸಿಕೆ ವ್ಯಕ್ತಪಡಿಸಿದರು. ಸೇವಾಪ್ರತಿನಿಧಿ ಆನಂದ ಸ್ವಾಗತಿಸಿ, ರೂಪಾಶ್ರೀ ವಂದಿಸಿದರು. ಬಿ.ಸಿ. ರೋಡ್‌ ವಲಯದ ಮೇಲ್ವಿಚಾರಕ ರಮೇಶ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next