Advertisement

ಡ್ಯಾನ್ಸ್‌ ತಂದ ಅವಕಾಶಹರ್ಷ ನಂಬಿರೋ ವರ್ಧನ

03:45 AM Feb 17, 2017 | Harsha Rao |

“ಕೆಲವರು ನನ್ನನ್ನು ಲಕ್ಕಿಹ್ಯಾಂಡ್‌ ಅಂತಾರೆ …’
– ಹೀಗೆಂದರು ನಿರ್ದೇಶಕ ನಾಗೇಂದ್ರ ಅರಸ್‌. ಅವರು ಹೀಗೆ ಹೇಳಲು ಇದ್ದ ಕಾರಣ “ರಾಕಿ’ ಸಿನಿಮಾ. ಯಶ್‌ ಪೂರ್ಣಪ್ರಮಾಣದ ನಾಯಕರಾಗಿ ನಟಿಸಿದ ಮೊದಲ ಸಿನಿಮಾವಿದು. ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ನಾಗೇಂದ್ರ ಪ್ರಸಾದ್‌. ಇಂದು ಯಶ್‌ ಕನ್ನಡ ಚಿತ್ರರಂಗದ ಸ್ಟಾರ್‌ ನಟ. ಆ ಕಾರಣದಿಂದಲೇ ನಾಗೇಂದ್ರ ಪ್ರಸಾದ್‌ರನ್ನು ಕೆಲವರು ಲಕ್ಕಿ ಹ್ಯಾಂಡ್‌ ಎನ್ನುತ್ತಿದ್ದಾರಂತೆ. ಅಷ್ಟಕ್ಕೂ ಈಗ ಲಕ್ಕಿ ಹ್ಯಾಂಡ್‌ ಸುದ್ದಿ ಯಾಕೆ ಬಂತು ಎಂದರೆ ಅದಕ್ಕೆ ಕಾರಣ “ವರ್ಧನ’. ನಾಗೇಂದ್ರ ಪ್ರಸಾದ್‌ ನಿರ್ದೇಶನದ “ವರ್ಧನ’ ಚಿತ್ರ ಇಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಹರ್ಷ ನಾಯಕರಾಗಿ ನಟಿಸಿದ್ದಾರೆ. ಹರ್ಷ ಕೆಲ ವರ್ಷಗಳಿಂದ ಚಿತ್ರರಂಗದಲ್ಲಿದ್ದರೂ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಕ್ಕಿರಲಿಲ್ಲ. ಆದರೆ “ವರ್ಧನ’ ಮೂಲಕ ಸಿಗುತ್ತದೆ ಎಂಬ ವಿಶ್ವಾಸ ನಾಗೇಂದ್ರ ಅರಸ್‌ಗಿದೆ. ಇನ್ನು, “ವರ್ಧನ’ ಒಂದು ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾವಾಗಿದ್ದು, ಕಾಮಿಡಿ ಜೊತೆಗೆ ಆ್ಯಕ್ಷನ್‌ ಪ್ರೇಕ್ಷಕರಿಗೆ ಖುಷಿಕೊಡುತ್ತದೆ ಎಂಬುದು ನಾಗೇಂದ್ರ ಅರಸ್‌ ಮಾತು.

Advertisement

ನಾಯಕ ಹರ್ಷಗೆ ಈ ಅವಕಾಶ ಸಿಕ್ಕಿದ್ದು “ಗಜಪಡೆ’ ಚಿತ್ರದ ಡ್ಯಾನ್ಸ್‌ ನೋಡಿಯಂತೆ. ಎಡಿಟಿಂಗ್‌ ಸಮಯದಲ್ಲಿ ಸ್ಟುಡಿಯೋಗೆ ಬಂದಿದ್ದ ನಾಗೇಂದ್ರ ಅರಸ್‌, ಹರ್ಷ ಅವರ ಡ್ಯಾನ್ಸ್‌ ನೋಡಿ ಫಿದಾ ಆದರಂತೆ. ಹಾಗೆ ಫಿದಾ ಆಗಿದ್ದು ಈಗ ಸಿನಿಮಾ ಮಾಡುವ ಹಂತಕ್ಕೆ ಬಂದಿದೆ. ಈ ಚಿತ್ರದ ಮೂಲಕ ಗೆಲುವ ಸಿಗುವ ವಿಶ್ವಾಸ ಹರ್ಷಗಿದೆ. ಚಿತ್ರದಲ್ಲಿ ಪೆಟ್ರೋಲ್‌ ಪ್ರಸನ್ನ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ಜನ ಅವರ ಪಾತ್ರವನ್ನು ಎಂಜಾಯ್‌ ಮಾಡುತ್ತಾರೆಂಬ ವಿಶ್ವಾಸವಿದೆಯಂತೆ. ನಿರ್ಮಾಪಕ ಸುಧಾಕರ್‌ ಹೆಚ್ಚು ಮಾತನಾಡುವ ಗೋಜಿಗೆ ಹೋಗಲಿಲ್ಲ.  ಚಿತ್ರದಲ್ಲಿ ನೇಹಾ ಪಾಟೀಲ್‌ ನಾಯಕಿಯಾಗಿ ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next