Advertisement

ಕಾರಂತ ಕಲಾಭವನದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪುಸ್ತಕ ಮಳಿಗೆ ಭರವಸೆ

01:32 AM Jun 25, 2019 | Team Udayavani |

ಕೋಟ: ಡಾ|| ಶಿವರಾಮ ಕಾರಂತ ಕಲಾಭವನ ಕೋಟಕ್ಕೆ ಕನ್ನಡ ಪುಸ್ತಕ ಪ್ರಾಧಿಕಾರದ ರಾಜ್ಯಾಧ್ಯಕ್ಷೆ ಡಾ|ವಸುಂಧರ ಭೂಪತಿ ಇತ್ತೀಚೆಗೆ ಭೇಟಿ ನೀಡಿದರು.

Advertisement

ಕಲಾಭವನದ ವಿಶೇಷತೆಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇಂತಹ ಕಲಾಭವನಗಳ ಮೂಲಕ ಕಾರಂತರು ಶಾಶ್ವತವಾಗಿ ನಮ್ಮೊಡನಿರಲು ಸಾಧ್ಯವಿದೆ. ಇಲ್ಲಿಗೆ ಆಗಮಿಸುವ ಕಾರಂತಾಭಿಮಾನಿಗಳು, ಕಾರಂತರಿಗೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸಲು ಸಹಾಯಕವಾಗುವ ರೀತಿಯಲ್ಲಿ ಪ್ರಾಧಿಕಾರದಿಂದ ಪುಸ್ತಕ ಮಳಿಗೆ ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು.

ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಪ್ರಾಧಿಕಾರದ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು. ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್‌ ಆಚಾರ್‌, ಕಾರಂತ ಥೀಮ್‌ ಪಾರ್ಕ್‌ ಮೇಲ್ವಿಚಾರಕ ಪ್ರಶಾಂತ್‌, ಗ್ರಂಥಾಲಯ ಮೇಲ್ವಿಚಾರಕಿ ಶೈಲಜಾ.ಕೆ.ಎನ್‌.ಸಹಾಯಕಿ ಪೂಜಾ ಈ ಸಂದರ್ಭ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next