Advertisement

ವಾಸ್ತವಗಳಿಗೆ ಮಿಡಿಯುವ  ಚಿತ್ರದ ಕುದುರೆ

01:30 PM Mar 27, 2019 | Naveen |
ಒಂದು ಒಳ್ಳೆಯ ಪುಸ್ತಕ ಸಾವಿರ ಸ್ನೇಹಿತರಿಗೆ ಸಮಾನ ಎಂಬ ಮಾತಿದೆ. ಆ ಪುಸ್ತಕದಲ್ಲಿ ನಮ್ಮ ಊಹೆಗೂ ನಿಲುಕದಷ್ಟು ಒಳಾರ್ಥಗಳು ತುಂಬಿರುತ್ತವೆ. ಕನ್ನಡದ ಕೆಲವು ಪುಸ್ತಕ ಹಾಗೂ ವ್ಯಾಕರಣಗಳ ಬಗೆಗಿನ ವಿಮರ್ಶೆ, ಸ್ವ ಅನುಭವದ ಮಾಹಿತಿ ಸಂಕಲನವೇ ಚಿತ್ರದ ಕುದುರೆ. ಲೇಖಕ ಅಕ್ಷರ ಕೆ.ವಿ. ಅವರು ಪುಸ್ತಕಗಳನ್ನು ಚಿತ್ರದ ಕುದುರೆಗಳಿಗೆ ಹೋಲಿಸಿದ್ದಾರೆ. ನಿಜ ಕುದುರೆಗೆ ಮತ್ತು ಚಿತ್ರದಲ್ಲಿರುವ ಕುದುರೆಗೆ ಹಲವಾರು ವ್ಯತ್ಯಾಸಗಳಿವೆ. ಅದರಂತೆ ಒಂದು ಪುಸ್ತಕ ಕೂಡ. ಅದರಲ್ಲಿ ಓದಿದಷ್ಟು ಮಾಹಿತಿಗಳ ಆಗರವೇ ಇದೆ.
ಘಟನೆ 1
ಸಾಲ ಮನ್ನಾ ಕುರಿತು ರೈತರು ಯಾಕೆ ಮಾತಾಡುವುದಿಲ್ಲ ಎಂಬ ಲೇಖನದಲ್ಲಿ ನಮ್ಮ ಸಾಲಗಳನ್ನು ಮನ್ನಾ ಮಾಡಿ ಎಂದು ಸ್ವತಃ ರೈತರೇ ಬೇಡಿಕೆ ಮಾಡುವುದನ್ನು ಯಾವ ಹಳ್ಳಿಯಲ್ಲೂ ನಾನು ನೋಡಿಲ್ಲ. ಯಾಕೆಂದರೆ ಇಂಥಾ ಮಾತನ್ನು ಆಯಾ ರೈತರಿಂದಲೇ ಸಣ್ಣಪುಟ್ಟ ಸಾಲಪಡೆದವರು ಕೂಡ ಹೇಳು ಆರಂಭಿಸಿದರೆ ಏನಾದೀತು ಎಂಬ ಧರ್ಮ ಸೂಕ್ಷ್ಮದ ಅರಿವು ಎಲ್ಲ ರೈತರಿಗೂ ಇದ್ದೇ ಇದೆ. ಬದಲು ರೈತರ ಪರವಾಗಿ ರಾಜಕರಣ
ಮಾಡುವವರು ಮಾತ್ರ ತಮ್ಮ ಘೋಷಣೆಯಾಗಿ ಈ ಮಂತ್ರವನ್ನು ಜಪಿಸುತ್ತಾರೆ.
ಘಟನೆ 2
ಜಾಗತೀಕರಣವು ನಮ್ಮೊಳಗೆ ಉಂಟು ಮಾಡಿರುವ ಸಾಂಸ್ಕೃತಿಕ ಪಲ್ಲಟಗಳಲ್ಲಿ ಪ್ರಮುಖವಾದ ಇನ್ನೊಂದು ಘಟನೆ- ಎಲ್ಲ ಮೌಲ್ಯಗಳನ್ನು ಬೆಲೆಯಾಗಿಸಿ ಅನುವಾದಿಸಿ ನೋಡುವಂತೆ ಹೇರಿರುವ ಒತ್ತಡ. ಕಳೆದ ಎರಡೇ ದಶಕಗಳಲ್ಲಿ ಶಿಕ್ಷಣ ಕ್ಷೇತ್ರದೊಳಗೆ ಆಗಿರುವ ಎಲ್ಲ ವ್ಯಾಪರೀಕರಣಗಳಿಗೂ ಮೂಲ ಪ್ರೇರಣೆ ಯಾಗಿರುವುದು ಈ ಪಲ್ಲಟ. ಇದರಿಂದಾಗಿ ಯಾವುದಕ್ಕೆ ಸುಲಭವಾಗಿ ಬೆಲೆ ಕಟ್ಟಲು ಸಾಧ್ಯವಿಲ್ಲವೋ ಅದು ಮೌಲ್ಯವಿಲ್ಲದ್ದು ಎಂಬ ನಂಬಿಕೆಯನ್ನು ಇದು ನಮ್ಮ ಮನಸ್ಸಿನ ಆಳದಲ್ಲಿ ನೆಟ್ಟಿದೆ.
ಘಟನೆ 3
ಉತ್ತರಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶ್ರೀಕೃಷ್ಣಪಾರಿಜಾತ ಎಂಬ ಹೆಸರಿನ ಒಂದು ಸಾಂಪ್ರದಾಯಿಕ ರಂಗಪ್ರಕಾರವು ಕಳೆದ ಸುಮಾರು ನೂರೈವತ್ತು ವರ್ಷ ಹೆಚ್ಚು ಕಾಲ ಜನಪ್ರಿಯತೆಯನ್ನು ಗಳಿಸಿ ಪ್ರಸಾರಗೊಳ್ಳುತ್ತಿದೆ. ಆಧುನಿಕತೆಯ ಉಬ್ಬರದ ಈ ಕಾಲದಲ್ಲಿ ಅದು ಸಂಪೂರ್ಣ ಸಾಯದೆ ಉಳಿದುಕೊಂಡಿದೆ ಎಂಬುದೇ ಅದರ ಧಾರಣಾ ಶಕ್ತಿಗೊಂದು ದ್ಯೋತಕವೂ ಆಗಿದೆ.
ಸುಶ್ಮಿತಾ ಶೆಟ್ಟಿ
Advertisement

Udayavani is now on Telegram. Click here to join our channel and stay updated with the latest news.

Next