Advertisement

ಯಾರೂ ಹಗಲು ಕನಸು ಕಾಣಬೇಡಿ..; ಸ್ವಪಕ್ಷೀಯರಿಗೆ ಸಚಿವ ಅಶೋಕ್ ಟಾಂಗ್

12:39 PM May 03, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆಯಷ್ಟೇ. ಆದರೆ ಕೇಂದ್ರದ ಸಹಕಾರ ಸಂಪೂರ್ಣವಾಗಿ ಬೊಮ್ಮಾಯಿ ಮೇಲಿದೆ. ಯಾರು ಕೂಡ ಹಗಲು ಕನಸು ಕಾಣಬೇಡಿ. ಬಿಸಿಲು ಕುದುರೆ ಹಿಂದೆ ಹೋಗಬೇಡಿ. ಬೊಮ್ಮಾಯಿಯವರ ನೇತೃತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಸಚಿವ ಆರ್.ಅಶೋಕ್ ಸ್ವಪಕ್ಷದವರಿಗೆ ಟಾಂಗ್ ನೀಡಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲ್ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದ ಆರ್ ಅಶೋಕ್, ಬಿ.ಎಲ್ ಸಂತೋಷ್ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ಬಸವ ಜಯಂತಿಯ ಜೊತೆಗೆ ಇವತ್ತು ಸಿಹಿ ಬಿಜೆಪಿಗೆ ಸಿಕ್ಕಿದೆ‌. ಬಸವರಾಜ ಹೊರಟ್ಟಿ ಅವರು ಬಿಜೆಪಿ ಸೇರುವ ಮನಸ್ಸು ಮಾಡಿದ್ದಾರೆ. ಇಡೀ ಕರ್ನಾಟಕದಲ್ಲಿ ವರ್ಚಸ್ಸು  ಬಿಜೆಪಿಗೆ ಬರುತ್ತೆ. ಸಜ್ಜನ ಸರಳಿಕೆ ಇರುವಂತಹ ವ್ಯಕ್ತಿ ಎಂದರು.

ಇದನ್ನೂ ಓದಿ:ಖೇಲೋ ಇಂಡಿಯಾ ಜತೆಗೆ ಬಿಜೆಪಿ ರಾಜಕೀಯ ಆಟಕ್ಕೂ ತೆರೆ ಎಳೆಯಲಿದ್ದಾರೆ ಅಮಿತ್ ಶಾ!

ಈ ಬಗ್ಗೆ ಮಾತನಾಡಿದ ಜಗದೀಶ್ ಶೆಟ್ಟರ್, ಅಮಿತ್ ಶಾ ರವರ ಜೊತೆ ಸಮಾಲೋಚನೆ ಮಾಡಿದ್ದೇವೆ. ಹೊರಟ್ಟಿಯವರು ಸೇರಿದ ಸಂತಸದ ಕ್ಷಣವನ್ನ ಚರ್ಚಿಸಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪನವರು ಹಿಂದೆಯೇ ಒತ್ತಾಯ ಮಾಡಿದ್ದರು ಆದರೆ ಈಗ ಕಾಲ ಬಂದಿದೆ. ಯಡಿಯೂರಪ್ಪನವರು ಖುಷಿಯಿಂದ ಬರಮಾಡಿಕೊಂಡಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next