Advertisement
371ನೇ(ಜೆ)ಕಲಂ ಪರಿಣಾಮಕಾರಿ ಅನುಷ್ಠಾನ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಅಭಿವೃದ್ಧಿ, ಉದ್ಯೋಗ, ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ (ಜೆ) ಕಲಂ ಪರಿಣಾಮಕಾರಿ ಅನುಷ್ಠಾನ ಆಗುತ್ತಿಲ್ಲ ಎನ್ನುವುದು ಎಲ್ಲರಿಗೂ ತಿಳಿದ ವಿಷಯ. 371ನೇ (ಜೆ) ವಿಧಿ ಅನುಷ್ಠಾನಕ್ಕೆ ಉಪಸಮಿತಿ ರಚಿಸುವುದು ಮುಖ್ಯವಾಗಿದೆ. ಕಲಂ ಜಾರಿಯಲ್ಲಿನ ಲೋಪದೋಷ ನಿವಾರಿಸಲು, ಸಣ್ಣಪುಟ್ಟ ತಿದ್ದುಪಡಿ ತರುವ ನಿಟ್ಟಿನಲ್ಲಿ ಹಿಂದಿನ ಸರ್ಕಾರದಲ್ಲಿ ಹಿರಿಯ ಸಚಿವರ ನೇತೃತ್ವದಲ್ಲಿ ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿತ್ತು.
Related Articles
Advertisement
ಆರ್ಸಿ ಕಚೇರಿ ರದ್ದತಿ ಬೇಡ: ಈಗಿರುವ ಪ್ರಾದೇಶಿಕ ಆಯುಕ್ತರ ಕಚೇರಿ ರದ್ದುಗೊಳಿಸಲು ಮುಂದಾಗಿರುವುದಾಗಿ ಈ ಹಿಂದಿನ ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ. ಆದರೆ ಆರ್ಸಿ ಕಚೇರಿ ರದ್ದಾದರೆ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ತೀವ್ರ ಹೊಡೆತ ಬೀಳುತ್ತದೆ. ಈಗ ಇರುವ ಪ್ರಾದೇಶಿಕ ಆಯುಕ್ತರನ್ನೇ ರದ್ದುಪಡಿಸಿ ರಾಜ್ಯಮಟ್ಟದಲ್ಲಿ ಕಂದಾಯ ಆಯುಕ್ತಾಲಯ ಸ್ಥಾಪಿಸುವುದು ಯಾವ ನಿಟ್ಟಿನಲ್ಲೂ ಔಚಿತ್ಯವಲ್ಲ ಎಂದೇ ಹೇಳಬಹುದು.
ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ಹಿಂದಿನಂತೆ ವಿಭಾಗೀಯ ಅಧಿಕಾರಿಗಳ ಕಚೇರಿಗಳಾಗಿ ಉನ್ನತೀಕರಣ ಮಾಡಬೇಕು. ಜಿಲ್ಲಾಧಿಕಾರಿಗಳ ಮೇಲೆ ಮೇಲುಸ್ತುವಾರಿ ಹಾಗೂ ಜಿಲ್ಲೆ, ತಾಲೂಕುಮಟ್ಟದ ಅ ಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರ, ಜವಾಬ್ದಾರಿ ನೀಡುವ ಮುಖ್ಯ ಕಾರ್ಯವಾಗಬೇಕಿದೆ. ಈ ಹಿಂದೆ ವಿಭಾಗಾಧಿಕಾರಿಗಳು ನ್ಯಾಯಾಲಯ ಕಲಾಪ ನಡೆಸುತ್ತಿದ್ದರು. ಅಂದರೆ ಜಿಲ್ಲಾಧಿಕಾರಿ ಆದೇಶವನ್ನು ವಿಭಾಗಾಧಿಕಾರಿಗಳಲ್ಲಿ ಪ್ರಶ್ನಿಸಲು ಅವಕಾಶವಿತ್ತು. ಈಗ ತೆಗೆದು ಹಾಕಿರುವುದನ್ನು ಮತ್ತೆ ಚಾಲ್ತಿಗೆ ತರಬೇಕು ಎನ್ನಲಾಗುತ್ತಿದೆ. ಆರ್ಸಿ ಕಚೇರಿ ಬಲಪಡಿಸುತ್ತಾರೆಂಬ ನಿರೀಕ್ಷೆ ಹೊಂದಲಾಗಿದೆ.
ನೀರಾವರಿ ಯೋಜನೆ ಸದುಪಯೋಗಕ್ಕೆ ಕ್ರಮ: ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವರಾಗಿದ್ದ ವೇಳೆ ಜಿಲ್ಲೆಯ ಗಂಡೋರಿನಾಲಾ, ಭೀಮಾ ಏತ ನೀರಾವರಿ ಸೇರಿದಂತೆ ಇತರೆ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ನಾಡಿಗೆ ಸಮರ್ಪಿಸಿದ್ದು, ಸಮರ್ಪಕ ಬಳಕೆಯಾಗುತ್ತಿಲ್ಲ. ಕೇವಲ ಆಣೆಕಟ್ಟು ನಿರ್ಮಿಸಿದಂತಾಗಿದೆ. ಆಣೆಕಟ್ಟಿಗೆ ತಕ್ಕ ಕಾಲುವೆಗಳು ನಿರ್ಮಾಣವಾಗಿಲ್ಲ. ಹೀಗಾಗಿ ನೀರು ಬಳಕೆಯೇ ಇಲ್ಲ ಎನ್ನುವಂತಾಗಿದೆ. ನೀರಿನ ಸದ್ಬಳಕೆಗೆ ಶಿಗ್ಗಾವಿ ಮಾದರಿಯಲ್ಲಿ ಜಿಲ್ಲೆಯಲ್ಲೂ ಹನಿ ನೀರಾವರಿಗೆ ಕ್ರಮ ಕೈಗೊಳ್ಳುವರೇ? ಎನ್ನುವ ನಿರೀಕ್ಷೆಯನ್ನು ತೊಗರಿ ನಾಡಿನ ಜನ ಹೊಂದಿದ್ದಾರೆ.
ಸಚಿವ ಸಂಪುಟದ ನಿರೀಕ್ಷೆಕಲಬುರಗಿಯಲ್ಲಿ ಈ ಹಿಂದೆ 2008ರ ಸೆಪ್ಟೆಂಬರ್ 26ರಂದು, 2009ರ ಆಗಸ್ಟ್ 27ರಂದು ಮತ್ತು 2010ರ ಅಕ್ಟೋಬರ್ 4ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ನಡೆದಿವೆ. ತದನಂತರ ಜಗದೀಶ ಶೆಟ್ಟರ ನೇತೃತ್ವದಲ್ಲೂ ಒಂದು ಸಲ ಸಚಿವ ಸಂಪುಟ ಸಭೆ ನಡೆದಿದೆ. ಆದರೆ ಕಳೆದೆರಡು ವರ್ಷಗಳ ಕಾಲ ಕೊರೊನಾ, ಪ್ರವಾಹ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ಸೂಕ್ತ ವಾತಾವರಣವೇ ನಿರ್ಮಾಣವಾಗಲಿಲ್ಲ. ಆದರೆ ಈಗ ನೂತನ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಾದರೂ ಸಚಿವ ಸಂಪುಟ ಸಭೆ ನಡೆಯಲೆಂಬುದು ಈ ಭಾಗದ ಆಗ್ರಹ ಹಾಗೂ ನಿರೀಕ್ಷೆಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆಯಲು ಮೂಲಸೌಕರ್ಯ ಕಲ್ಪಿಸುವ ಮುಖ್ಯ ಕೆಲಸವಾಗಬೇಕಿದೆ. ಈ ಭಾಗದಲ್ಲಿ ದೊಡ್ಡ-ದೊಡ್ಡ ಕಾರ್ಖಾನೆಗಳು ಬರುವಂತಾಗಲು ಭೂ ಬ್ಯಾಂಕ್ ಸ್ಥಾಪಿಸುವುದು ಮುಖ್ಯ. ನೀರಾವರಿ ಯೋಜನೆಗಳು ರೈತರಿಗೆ ತಲುಪಬೇಕು. ಕೊರೊನಾ ಸಮಯದಲ್ಲಿ ವ್ಯಾಪಾರಸ್ಥರ ವಿರುದ್ಧ ಹಾಕಲಾದ ಮೊಕದ್ದಮೆಗಳನ್ನು ವಾಪಸ್ ಪಡೆಯಬೇಕು.
ಪ್ರಶಾಂತ ಮಾನಕರ, ಅಧ್ಯಕ್ಷ, ಎಚ್ಕೆಸಿಸಿಐ *ಹಣಮಂತರಾವ ಭೈರಾಮಡಗಿ