Advertisement

ಬಾಂಬೆ ಹೈಕೋರ್ಟ್‌ ಜಡ್ಜ್ ರಾಜೀನಾಮೆ

09:55 AM Feb 16, 2020 | Hari Prasad |

ಮುಂಬೈ: ಬಾಂಬೆ ಹೈಕೋರ್ಟ್‌ನಲ್ಲಿ ಎರಡನೇ ಅತ್ಯಂತ ಹಿರಿಯ ನ್ಯಾಯಮೂರ್ತಿ ಸತ್ಯರಂಜನ್‌ ಧರ್ಮಾಧಿಕಾರಿ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.

Advertisement

ಕೌಟುಂಬಿಕ ಮತ್ತು ವೈಯಕ್ತಿಕ ಕಾರಣಗಳಿಂದ ಮಹಾರಾಷ್ಟ್ರದ ಹೊರಗೆ ವರ್ಗಾವಣೆಗೊಳ್ಳುವುದನ್ನು ಬಯಸದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದಾಗಿ ಹೇಳಿಕೊಂಡಿದ್ದಾರೆ.

ಅವರ ನೇತೃತ್ವದ ಪೀಠದ ಮುಂದೆ ಮುಂದಿನ ವಾರ ಪ್ರಕರಣವೊಂದು ವಿಚಾರಣೆ ನಡೆಯಲಿದೆ ಎಂಬ ಬಗ್ಗೆ ನ್ಯಾಯವಾದಿ ಮ್ಯಾಥ್ಯೂ ನೆಡುಂಪಾರ ಅರಿಕೆ ಮಾಡಿಕೊಂಡಾಗ ನ್ಯಾ| ಧರ್ಮಾಧಿಕಾರಿ “ನಾನು ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಇವತ್ತೇ (ಶುಕ್ರವಾರ) ಕೊನೆಯ ಕೆಲಸ ದಿನ’ ಎಂದರು.

ಅನಂತರ ಮಾತನಾಡಿದ ನೆಡುಂಪಾರಾ, ಜಡ್ಜ್ ಹಾಸ್ಯ ಮಾಡುತ್ತಿರಬಹುದು ಎಂದುಕೊಂಡಿದ್ದೆ. ಅವರ ನಿರ್ಧಾರ ಆಘಾತ ತಂದಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next