Advertisement

ಬಾಂಬ್‌ ಬೆದರಿಕೆ: ರೈಲ್ವೆ ನಿಲ್ದಾಣದಲ್ಲಿ ತಪಾಸಣೆ

05:29 AM Feb 23, 2019 | Team Udayavani |

ದಾವಣಗೆರೆ: ರಾಜ್ಯದ ರೈಲ್ವೆ ನಿಲ್ದಾಣವೊಂದರಲ್ಲಿ ಬಾಂಬ್‌ ಸ್ಫೋಟಿಸುವ ಬಗ್ಗೆ ಅನಾಮಿಕ ದೂರವಾಣಿ ಕರೆ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ನಗರದ ರೈಲ್ವೇ ನಿಲ್ದಾಣದಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ.

Advertisement

ಬೆಂಗಳೂರಿನ ಕಂಟ್ರೋಲ್‌ ರೂಂ ಸಂದೇಶದನ್ವಯ ತಡರಾತ್ರಿ 2-30ರ ವೇಳೆ ನಗರದ ರೈಲ್ವೆ ನಿಲ್ದಾಣಕ್ಕೆ ಬಾಂಬ್‌ ಪತ್ತೆ ದಳ, ಶ್ವಾನದಳ, ಎಸಿಟಿ ತಂಡ ಆಗಮಿಸಿ ಪ್ಲಾಟ್‌ಫಾರಂ ಒಳಗೊಂಡಂತೆ ರೈಲು ನಿಲ್ದಾಣದ ಸುತ್ತ ಮುತ್ತ ಒಂದು ಗಂಟೆ ಕಾಲತಪಾಸಣೆ ನಡೆಸಿದರು. ಜೊತೆಗೆ ಅಲ್ಲಿದ್ದ ಪ್ರಯಾಣಿಕರ ವಿಚಾರಿಸಿ, ಬ್ಯಾಗ್‌ಗಳನ್ನು ಪರಿಶೀಲಿಸಿದರು. ನಂತರ ಇಡೀ ರೈಲು ನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು.

ರೈಲ್ವೆ ಪೊಲೀಸ್‌ ಅಧಿಕಾರಿಗಳಾದ ಮಲ್ಲಿಕಾರ್ಜುನ್‌ ಮಠದ್‌, ಸೋಮ್ಲಾನಾಯ್ಕ, ನಗರ ಉಪ ವಿಭಾಗದ ಡಿವೈಎಸ್ಪಿ ನಾಗರಾಜ್‌, ಪೊಲೀಸ್‌ ಇನ್ಸ್‌ಪೆಕ್ಟರ್‌ ಇ. ಆನಂದ್‌ ಮತ್ತು ಸಿಬ್ಬಂದಿ ಕಾರ್ಯಾಚರಣೆ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next