Advertisement

ಬೊಯಿಸರ್‌ ಶ್ರೀ ನಿತ್ಯಾನಂದ ಸ್ವಾಮಿ ಮಂದಿರ:ಪ್ರತಿಷ್ಠಾ ವರ್ಧಂತಿ

11:15 AM Jan 01, 2019 | Team Udayavani |

ಮುಂಬಯಿ: ಬೊಯಿಸರ್‌ ಪಶ್ಚಿಮದ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಮಂದಿರದ ಎಂಟನೇ ವಾರ್ಷಿಕ ಪ್ರತಿಷ್ಠಾಪನ ಮಹೋತ್ಸವವು ಡಿ. 27 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾತಃಕಾಲದಿಂದ ಗಣಹೋಮ, ಕಲಶಾಭಿಷೇಕ ಹಾಗೂ ಶ್ರೀ ಸತ್ಯನಾರಾಯಣ ಮಹಾಪೂಜೆಯು ವಿವಿಧ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಪುರೋಹಿತರಾದ ಹರೀಶ್‌ ಶಾಂತಿ, ರಾಜೇಶ್‌ ಶಾಂತಿ ಅವರು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಸದ್ಗುರು ನಿತ್ಯಾನಂದರ ನೂತನ ಉತ್ಸವ ಮೂರ್ತಿಯನ್ನು ಬೊಯಿಸರ್‌ ಹೊಟೇಲ್‌ ಉದ್ಯಮಿ ಪ್ರವೀಣ್‌ ವಾಸು ಶೆಟ್ಟಿ ಅವರು ಅರ್ಪಿಸಿದರು. ನಿತ್ಯಾನಂದ ಭಕ್ತ ಮಂಡಳಿಯ ಸುಹಾಸಿನಿ ಡಿ. ನಾೖಕ್‌, ಸತ್ಯಾ ಕೋಟ್ಯಾನ್‌, ರಮಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಸತ್ಯಾ ಕೋಟ್ಯಾನ್‌ ಮತ್ತು ಪ್ರವೀಣ್‌ ಶೆಟ್ಟಿ ಅವರು ಕಲಶಾಭಿಷೇಕ ಸೇವೆಯನ್ನು ಮಾಡಿದರು. ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಶ್ರೀ ನಿತ್ಯಾನಂದ ಸ್ವಾಮಿಗಳ ಭಕ್ತಾದಿಗಳು ನೂರಾರು ಸಂಖ್ಯೆಯಲ್ಲಿ  ಉಪಸ್ಥಿತರಿದ್ದರು. ತುಳು-ಕನ್ನಡಿಗರು, ಸ್ಥಳೀಯ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. 

ಚಿತ್ರ-ವರದಿ : ಪಿ. ಆರ್‌. ರವಿಶಂಕರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next