Advertisement

ದೇಹದಾರ್ಢ್ಯ : “ಮಿಸ್ಟರ್‌ ಇಂಡಿಯಾ’ಸ್ಪರ್ಧೆಗೆ ಸೋಮಶೇಖರ್‌ ಖಾರ್ವಿ

12:47 AM Mar 17, 2021 | Team Udayavani |

ಕುಂದಾಪುರ: ರಾಯಚೂರಿನಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯ 65 ಕೆ.ಜಿ. ವಿಭಾಗ ದಲ್ಲಿ ಕಂಚಿನ ಪದಕ ಗೆದ್ದ ತ್ರಾಸಿ ಕಂಚುಗೋಡಿನ ಸೋಮಶೇಖರ್‌ ಖಾರ್ವಿ ಅವರು ರಾಷ್ಟ್ರ ಮಟ್ಟದ “ಮಿಸ್ಟರ್‌ ಇಂಡಿಯಾ’ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಈ ಸ್ಪರ್ಧೆ ಹೊಸದಿಲ್ಲಿಯಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಚಾಂಪಿಯನ್‌ ಆಗುವುದು ಇವರ ಬಹು ದೊಡ್ಡ ಕನಸು.

Advertisement

ಮೂಲತಃ ಭಟ್ಕಳದವರಾದ ಸೋಮಶೇಖರ್‌, ಬದುಕು ಕಟ್ಟಿ ಕೊಳ್ಳಲು ತಂದೆಯ ಊರಾದ ತ್ರಾಸಿಯ ಕಂಚುಗೋಡಿಗೆ ಬಂದರು. ವೃತ್ತಿಯಲ್ಲಿ ಮೀನುಗಾರರಾಗಿದ್ದು, ಅತ್ಯಂತ ಬಡ ಕುಟುಂಬವಾಗಿದೆ. ಓದಿದ್ದು 2ನೇ ತರಗತಿಯಾದರೂ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಉನ್ನತ ಸಾಧನೆಗೈದಿದ್ದಾರೆ. ಈ ಹಿಂದೆಯೂ ಹಲವು ಬಾರಿ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿ, ರಾಷ್ಟ್ರ ಮಟ್ಟದ ದೇಹದಾರ್ಢ್ಯ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದರೂ ಆರ್ಥಿಕ ಅಡಚಣೆಯಿಂದ ಮಿಸ್ಟರ್‌ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲು ಇವರಿಗೆ ಸಾಧ್ಯವಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next