Advertisement

ಮುಂಬಯಿ ಉದ್ಯಮಿಯ ಶವ ಶಾಂಭವಿ ನದಿಯಲ್ಲಿ ಪತ್ತೆ

09:32 PM Apr 01, 2023 | Team Udayavani |

ಕಾರ್ಕಳ:ಮುಂಬಯಿನಲ್ಲಿ ಉದ್ಯಮಿಯಾಗಿರುವ ಮುಂಡ್ಕೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಿವಾಸಿ ರಮೇಶ (68)ಸಪಳಿಗರವರ‌ ಶವ ಮುಂಡ್ಕೂರಿನ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದೆ.

Advertisement

ಮುಂಬಾಯಿಯಲ್ಲಿ ಹೊಟೇಲು ಕೆಲಸ ಮಾಡಿಕೊಂಡಿದ್ದ ಅವರು , ವಿಪರೀತ ಮದ್ಯಪಾನ ಮಾಡುತ್ತಿದ್ದರು. ತನ್ನ ತಮ್ಮನ ಆನಾರೋಗ್ಯದ ಬಗ್ಗೆ ಊರಿಗೆ ಬಂದು ಊರಿನಲ್ಲಿದ್ದರು.

ಊರಿಗೆ ಬಂದ ಬಳಿಕ ವಿಪರೀತ ಮದ್ಯಪಾನ ಮಾಡುತ್ತಿ ಅವರು ಮಾ.29ರಂದು ರಾತ್ರಿ 9ಕ್ಕೆ ತಮ್ಮ ಮನೆಯಿಂದ ಮದ್ಯಪಾನ ಮಾಡಲು ಮುಂಡ್ಕೂರಿಗೆ ನಡೆದುಕೊಂಡು ಹೋದವರು ವಾಪಾಸು ಮನೆಗೆ ಬಾರದೇ ಇದ್ದು, ರಮೇಶ ಸಪಳಿಗ ಇವರ ಮೃತ ದೇಹ ಮಾ.31ರಂದು ಗಂಟೆಗೆ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ ನಾಗಬನದ ಸಮೀಪ ಹರಿಯುವ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿರುತ್ತದೆ.

ರಮೇಶ್‌ ಸಪಳಿಗ ಇವರು ವಿಪರೀತ ಮದ್ಯಪಾನ ಮಾಡುವ ಕುಡಿಯುವ ಚಟವನ್ನು ಹೊಂದಿದ್ದು, ಅವರು ಮದ್ಯಪಾನ ಸೇವನೆ ಮಾಡಿ ನಡೆದುಕೊಂಡು ವಾಪಾಸು ಮನೆ ಕಡೆಗೆ ಬರುತ್ತಿರುವಾಗ ಅಕಸ್ಮಿಕವಾಗಿ ಕಾಲು ಜಾರಿ ಶಾಂಭವಿ ಹೊಳೆಯಲ್ಲಿ ಬಿದ್ದು ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next