Advertisement

ಅಪಹರಣಕ್ಕೊಳಗಾದ ಚಿನ್ನದ ವ್ಯಾಪಾರಿಯ ಶವ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆ

09:59 AM Nov 06, 2022 | Team Udayavani |

ಬಿಹಾರ : ಬಿಹಾರದ ಅರ್ರಾದಲ್ಲಿ ಅಪಹರಣಕಾರರಿಂದ ಅಪಹರಣಕ್ಕೊಳಗಾಗಿದ್ದ ಚಿನ್ನದ ವ್ಯಾಪಾರಿಯ ಮೃತದೇಹವು ನದಿಯೊಂದರಲ್ಲಿ ಪತ್ತೆಯಾಗಿದೆ ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.

Advertisement

ಚಿನ್ನದ ವ್ಯಾಪಾರಿಯನ್ನು ಹರಿಜಿ ಗುಪ್ತಾ ಎಂದು ಗುರುತಿಸಲಾಗಿದ್ದು ಬುಧವಾರ ಗುಪ್ತಾ ಅವರಿಗೆ ಕುಟುಂಬಸ್ಥರು ಕರೆ ಮಾಡಿದ ಸಂದರ್ಭ ಕರೆ ಸ್ವೀಕರಿಸಲಿಲ್ಲ, ಆಲದೆ ಮನೆಗೂ ಬಂದಿರಲಿಲ್ಲ ಇದರಿಂದ ಸಂಶಯಗೊಂಡ ಕುಟುಂಬದವರು ಪೊಲೀಸ್ ಠಾಣೆಗೆ ಅಪಹರಣವಾಗಿರುವ ಕುರಿತು ದೂರು ನೀಡಿದ್ದಾರೆ.

ಘಟನೆ ಕುರಿತು ಪೊಲೀಸರು ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಸಿ ಶನಿವಾರ ಗುಪ್ತಾ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ನದಿಯೊಂದರಲ್ಲಿ ಪತ್ತೆಯಾಗಿದೆ.

ಅಪಹರಣ ಮಾಡಿದ ತಂಡ ವ್ಯಕ್ತಿಯನ್ನು ಕೊಲೆ ಮಾಡಿ ನದಿಗೆಸೆದಿರಬಹುದು ಎನ್ನಲಾಗಿದ್ದು, ಕೊಳೆತ ಸ್ಥಿತಿಯಲ್ಲಿ ದೇಹ ಪತ್ತೆಯಾಗಿದೆ, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹಿಮಾಂಶು ಶನಿವಾರ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಪೊಲೀಸರು ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಹರಿಜಿ ಗುಪ್ತಾ ಬಿಹಾರದ ಅರ್ರಾ ನಿವಾಸಿಯಾಗಿದ್ದು, ಅವರು ಅರ್ರಾದಲ್ಲಿ ಮೂರು ಆಭರಣ ಅಂಗಡಿಗಳನ್ನು ಮತ್ತು ಪಾಟ್ನಾದಲ್ಲಿ ಎರಡು ಆಭರಣ ಅಂಗಡಿಗಳನ್ನು ಹೊಂದಿದ್ದರು. ಅಲ್ಲದೆ ಅರಾಹ್ ಬೈಪಾಸ್ ರಸ್ತೆಯಲ್ಲಿ ಮಾರುಕಟ್ಟೆಯನ್ನು ಹೊಂದಿದ್ದರು, ಅಲ್ಲಿ ಹಲವಾರು ಅಂಗಡಿಗಳನ್ನು ನಡೆಸುತಿದ್ದರು ಎನ್ನಲಾಗಿದೆ.

ಇದನ್ನೂ ಓದಿ : ಇಂಡಿಯನ್‌ ಡಿಜಿಟಲ್‌ ಯುನಿವರ್ಸಿಟಿ ಮೂಲಕ 15 ಲಕ್ಷ ಶಿಕ್ಷಕರಿಗೆ ತರಬೇತಿ

Advertisement

Udayavani is now on Telegram. Click here to join our channel and stay updated with the latest news.

Next