Advertisement

ದೂಧ್ ಸಾಗರ ನದಿಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತ ದೇಹ ಪತ್ತೆ

10:25 AM Jun 02, 2021 | Team Udayavani |

ಪಣಜಿ: ಧಾರಾಬಾಂದೋಡಾದ ದೂಧಸಾಗರ ನದಿಯಲ್ಲಿ ಮುಳುಗಿದ್ದ ಇಬ್ಬರು ವಿದ್ಯಾರ್ಥಿಗಳ ಮೃತದೇಹ ಪತ್ತೆಯಾಗಿದ್ದು ಬಾಂಬೋಲಿಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಮೃತದೇಹವನ್ನು ಒಪ್ಪಿಸಲಾಗಿದೆ.

Advertisement

ವಿದ್ಯಾರ್ಥಿ ಪ್ರದೀಪ ನಿಂಗಪ್ಪಾ ಮಲನಾವರ್ ಈ ವಿದ್ಯಾರ್ಥಿಯ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಕರ್ನಾಟಕಕ್ಕೆ ತೆಗೆದುಕೊಂಡು ಹೋದಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿ ಪ್ರದೀಪ ಈತನ ಕುಟುಂಬಸ್ಥರು ಕೆಲಸದ ನಿಮಿತ್ತ ಪೊಂಡಾದ ಕುರ್ಟಿಯಲ್ಲಿ ವಾಸಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಮಗನ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ತಮ್ಮ ಊರಿಗೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪೊಂಡಾದ ಕುರ್ಟಿಯ ದಾದಾ ವೈದ್ಯ ವಿದ್ಯಾಲಯದಲ್ಲಿ ಹತ್ತನೇಯ ತರಗತಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ತಂಡ ಸೋಮವಾರ ಧಾರಾಬಾಂದೋಡಾದ ದೂಧಸಾಗರ ನದಿಗೆ ಪ್ರವಾಸಕ್ಕೆ ತೆರಳಿದ್ದರು. ಗೋವಾ ಸರ್ಕಾರವು ಹತ್ತನೇಯ ತರಗತಿಯ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೆಯೇ ಪಾಸ್ ಮಾಡಲು ಘೋಷಿಸಿದ್ದರಿಂದ, ಇದರ ಆನಂದಕ್ಕೆ ಪಿಕ್‍ನಿಕ್‍ಗೆ ತೆರಳಿದ್ದರು.

ಸೋಮವಾರ ಸಂಜೆಯ ವೇಳೆಗೆ  ನದಿಯಲ್ಲಿ ಸ್ನಾನ ಮಾಡಿ ಮೇಲೆ ಬರುವ ಸಂದರ್ಭದಲ್ಲಿ ಸಾನಿಯಾ ಕಾಲು ಜಾರಿ ಬಿದ್ದು ತೇಲಿ ಹೋಗುತ್ತಿರುವಾಗ ಆಕೆಯನ್ನು ರಕ್ಷಿಸಲು ಪ್ರದೀಪ ಈತನು ನದಿಗೆ ಹಾರಿ ಆಕೆಯನ್ನು ರಕ್ಷಿಸಲು ಹೋಗಿದ್ದ. ಆದರೆ ನದಿ ನೀರು ರಭಸವಾಗಿ ಹರಿಯುತ್ತಿರುವುದರಿಂದ ಇಬ್ಬರೂ ನೀರಲ್ಲಿ ತೇಲಿ ಹೋಗಿದ್ದರು. ಅಗ್ನಿಶಾಮಕ ದಳದ ಸಿಬ್ಬಂಧಿಗಳು ಮತ್ತು ಪೋಲಿಸರು ಸತತ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಪತ್ತೆಹಚ್ಚಿ ಸಂಬಂಧಿಕರಿಗೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next