Advertisement

ಮರಳುಗಾರಿಕೆ ಇಲ್ಲದೇ ದಡ ಸೇರಿದ ದೋಣಿಗಳು

08:50 AM Jul 26, 2017 | Harsha Rao |

ಬಸ್ರೂರು: ಬಳ್ಕೂರು, ಬಸ್ರೂರು ಆನಗಳ್ಳಿ, ಕಂಡಲೂರು, ಹಳ್ನಾಡು, ಜಪ್ತಿ, ಮೊಳಹಳ್ಳಿ ಮುಂತಾದೆಡೆ ಅಕ್ರಮವಾಗಿ ಮರಳನ್ನು ತೆಗೆಯಲಾಗುತ್ತಿತ್ತು. ಆದರೆ ಕಂಡೂÉರಿನ ಮರಳುಗಾರಿಕಾ ಅಡ್ಡೆ ಮೇಲೆ ಜಿಲ್ಲಾಧಿಕಾರಿಗಳ ದಾಳಿಯ ಅನಂತರ ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಸ್ಥಗಿತಗೊಂಡಿತ್ತು. 

Advertisement

ಸಚಿವರು ಶಾಸಕರು ಕರಾವಳಿ ಭಾಗಕ್ಕೆ  ಶ್ರೀಘ್ರದಲ್ಲಿ ನೂತನ ಮರಳುಗಾರಿಕಾ ನೀತಿಯನ್ನು ಜಾರಿಗೆ ತರಲಾಗುವುದೆಂದು ತಿಳಿಸಿದ್ದಾರೆ. ಸದನ ಸಮಿತಿಯೂ ರಚನೆಯಾಗಿ ತಿಂಗಳುಗಳೇ  ಕಳೆದಿವೆ. ಮರಳಿನ ಅಭಾವ ತೀವ್ರವಾಗಿದೆ. ದುರಂತವೆಂದರೆ ಈವರೆಗೂ ಯಾವುದೇ ಮರಳು ನೀತಿಯೂ ಜಾರಿಯಾಗಿಲ್ಲ. ಮರಳುಗಾರಿಕೆಗೆ ಯಾರಿಗೂ ಅನುಮತಿಯನ್ನೂ ನೀಡಿಲ್ಲ.

ಈ ಮಧ್ಯೆ ಜು. 26ರಂದು ಕಟ್ಟಡ ಕಾರ್ಮಿಕರು ರಾಜ್ಯದಾದ್ಯಂತ ಶಾಸಕರ, ಸಚಿವರ ಮನೆ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ನದಿಯಲ್ಲಿದ್ದ ದೋಣಿಗಳು ಮಾತ್ರ ಈಗ ದಡ ಸೇರಿದ್ದು ಈ ಎಲ್ಲ ವಿದ್ಯಮಾನಗಳಿಗೆ ಮೂಕಸಾಕ್ಷಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next