Advertisement

ಕೃಷ್ಣಾ ನದಿಯಲ್ಲಿ ದೋಣಿ ದುರಂತ: 17 ಜನ ಸಾವು

06:45 AM Nov 13, 2017 | Harsha Rao |

ಅಮರಾವತಿ: ಸಾಮರ್ಥ್ಯಕ್ಕಿಂತ ಹೆಚ್ಚು ಜನರನ್ನು ತುಂಬಿಕೊಂಡು ಸಾಗುತ್ತಿದ್ದ ದೋಣಿಯೊಂದು ಕೃಷ್ಣಾ ನದಿಯಲ್ಲಿ ಮುಳುಗಿದ ಪರಿಣಾಮ 16 ಮಂದಿ ಅಸುನೀಗಿದ್ದಾರೆ. ಅಸುನೀಗಿದವರ ಪೈಕಿ ಆರು ಮಹಿಳೆಯರು, ನಾಲ್ವರು ಮಕ್ಕಳೂ ಸೇರಿದ್ದಾರೆ. ಈ ಘಟನೆಯಲ್ಲಿ 7 ಮಂದಿ ನಾಪತ್ತೆಯಾಗಿದ್ದಾರೆ. ಇತರ 15 ಮಂದಿಯನ್ನು ಮೀನುಗಾರರು ಪಾರು ಮಾಡಿದ್ದಾರೆ. ವಿಜಯವಾಡದ ಬಳಿ ರವಿವಾರ ಸಂಜೆ ಜರುಗಿದೆ. 

Advertisement

ಖಾಸಗಿ ಪ್ರವಾಸಿ ಸಂಸ್ಥೆಯೊಂದಕ್ಕೆ ಸಂಬಂಧಿಸಿದ ಈ ದೋಣಿ ಪ್ರವಾಸಿಗರನ್ನು ತುಂಬಿಕೊಂಡು ಭವಾನಿಪುರದ ಬಳಿಯ ಪುಣ್ಣಮಿ ಘಾಟ್‌ನಿಂದ ಪವಿತ್ರ ಸಂಗಮಮ್‌ ಕಡೆಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ. 

ಪುಟ್ಟ ದೋಣಿಯಲ್ಲಿ 38 ಪ್ರಯಾಣಿಕರು ತುಂಬಿದ್ದರು. ನದಿಯ ಮಧ್ಯಕ್ಕೆ ಹೋದ ಕೂಡಲೇ ದೋಣಿ ಮಗುಚಿಕೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) ತುಕಡಿಯೊಂದು ಆಗಮಿಸಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next