Advertisement

ದೋಣಿ ಮುಳುಗಡೆಯಾಗಿ 25ಕ್ಕೂ ಹೆಚ್ಚು ಜನರು ನಾಪತ್ತೆ: 5 ಮೃತದೇಹ ಪತ್ತೆ

09:34 AM Sep 16, 2019 | Mithun PG |

ಆಂಧ್ರ ಪ್ರದೇಶ: ದೋಣಿ ಮುಳುಗಡೆಯಾಗಿ 25ಕ್ಕೂ ಹೆಚ್ಚು ಜನರು ನಾಪತ್ತೆಯಾದ ದುರ್ಘಟನೆ ಕುಚ್ಚಲೂರು ಬಳಿಯ ಗೋದಾವರಿ ನದಿಯಲ್ಲಿ ನಡೆದಿದೆ.

Advertisement

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕುಚ್ಚಲೂರು ನದಿಯಲ್ಲಿ ಈ ಭೀಕರ ಘಟನೆ ನಡೆದಿದೆ. ಇದೊಂದು ಪ್ರವಾಸಿ ದೋಣಿಯಾಗಿದ್ದು ಜನರನ್ನು ನದಿಯ ದಡದಲ್ಲಿರುವ ಗುಂಡಿಪೋಚಮ್ಮ ದೇವಾಲಯದಿಂದ ಪಪಿಕೊಂಡಾಲು ಬೆಟ್ಟಗಳಿಗೇ ಕರೆದೊಯ್ಯುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.

ಈಗಾಗಲೇ ಐದು ಮೃತದೇಹ ಹೊರಕ್ಕೆ ತೆಗೆಯಲಾಗಿದ್ದು, ನಾಪತ್ತೆಯಾದವರಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಎನ್  ಡಿಅರ್ ಎಫ್ ಸಿಬ್ಬಂದಿ ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರನೆ ನಡೆಸುತ್ತಿದ್ದಾರೆ.

ಲೈಫ್ ಜಾಕೆಟ್ ಮೂಲಕ 14 ಜನರು ಈಜಿ ದಡ ಸೇರಿದ್ದು, ಸ್ಥಳಿಯರಿಂದ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ 10 ಜನರ ರಕ್ಷಣೆ ಮಾಡಲಾಗಿದೆ. ನಾಪತ್ತೆಯಾದವರಿಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.

ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next