Advertisement

BMTC ಬಸ್‌ ಢಿಕ್ಕಿಯಾಗಿ ಇಬ್ಬರು ಪಿಯುಸಿ ವಿದ್ಯಾರ್ಥಿಗಳ ದಾರುಣ ಸಾವು 

11:10 AM Dec 18, 2018 | Team Udayavani |

ಬೆಂಗಳೂರು: ಬಿಎಂಟಿಸಿ ಬಸ್‌ ಢಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಮೈಸೂರು ರಸ್ತೆಯಲ್ಲಿ ನಡೆದಿದೆ. 

Advertisement

ಕಸ್ತೂರ್ಬಾ ಬಸ್‌ ನಿಲ್ದಾಣದಲ್ಲಿ ಅವಘಡ ನಡೆದಿದ್ದು, ಯದುಕುಮಾರ್‌ ಎಸ್‌.ವೈ, ಚಂದ್ರಕಾಂತ್‌ ಎನ್ನುವ ಇಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ .ಇಬ್ಬರೂ ಪಿಯುಸಿ ವಿದ್ಯಾರ್ಥಿಗಳು.

ಕಾಲೇಜಿಗೆ ಹೋಗಲು ನಿಂತಿದ್ದಾಗ ಬಸ್‌ ಢಿಕ್ಕಿಯಾಗಿ ಅವಘಡ ಸಂಭವಿಸಿದೆ. ಬೆಳ್ಳಂಬೆಳಗ್ಗೆ ಅವಘಡ ಸಂಭವಿಸಿದ್ದು , ಬಸ್‌ನ ಬ್ರೇಕ್‌ ಫೇಲ್‌ ಆಗಿದ್ದು ದುರಂತಕ್ಕೆ ಕಾರಣವಾಗಿದೆ. 

ಇಬ್ಬರೂ ಕೂಲಿ ಕಾರ್ಮಿಕರ ಮಕ್ಕಳಾಗಿದ್ದು, ಮಕ್ಕಳ ನೇತ್ರದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಬಿಬಿಎಂಪಿ ಘೋಷಿಸಿದೆ.

Advertisement

ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next