Advertisement

ಹಳ್ಳಿಯಲ್ಲಿ ಅರಳಿದ ಪ್ರೀತಿ

03:45 AM Feb 10, 2017 | Harsha Rao |

“ಈ ಕಲರವ’ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳ  ಬಿಡುಗಡೆಗೆ ಇತ್ತೀಚೆಗೆ ನಡೆಯಿತು.  ಶಾಸಕರಾದ ಸಾ.ರಾ. ಮಹೇಶ್‌, ಜಿ.ಟಿ.ದೇವೇಗೌಡ, ಮಾಲೂರು ಮಂಜುನಾಥ್‌, ರಾಜನ್‌ ಸೇರಿದಂತೆ ಅನೇಕರು ಜೊತೆಯಾಗಿ ಆಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಎಂ.ಮಹದೇವಗೌಡ ಈ ಸಿನಿಮಾದ ನಿರ್ಮಾಪಕರು.  ಈ ಹಿಂದೆ “ಬಿಕೋ’ ಎಂಬ ಸಿನಿಮಾ ಮಾಡಿದ್ದ ಸಂದೀಪ್‌ ದಕ್ಷ ಈಗ “ಈ ಕಲರವ’ ಮೂಲಕ ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

Advertisement

“ಈ ಕಲರವ’ ಗ್ರಾಮೀಣ ಸೊಗಡಿನ ಕಥೆ. ಗ್ರಾಮವೊಂದರಲ್ಲಿ ನಡೆಯುವ ರಾಜಕೀಯದ ಜೊತೆಗೆ ಪ್ರೀತಿ, ಅದಕ್ಕೆ ಅಡ್ಡಿಯಾಗುವ ಅಂಶಗಳು, ಪ್ರೀತಿ ಉಳಿಸಿಕೊಳ್ಳಲು ನಾಯಕನ ಹೋರಾಟದ ಸುತ್ತ ಈ ಸಿನಿಮಾ ಸಾಗಲಿದೆಯಂತೆ. ಕಾಮಿಡಿ ಪ್ರಿಯರಿಗಾಗಿ ನವಿರಾದ  ಹಾಸ್ಯವನ್ನು ಈ ಚಿತ್ರದಲ್ಲಿ ಇಡಲಾಗಿದ್ದು, ಪ್ರೀತಿ ಹಾಗೂ ಸಾಮಾಜಿಕ ಸಂದೇಶವನ್ನು ಈ ಚಿತ್ರದ ಮೂಲಕ ಹೇಳಲಾಗಿದೆಯಂತೆ. ಚಿತ್ರದ ಬಹುತೇಕ ಚಿತ್ರೀಕರಣ  ಕೆ.ಆರ್‌.ನಗರದ ತಿಪ್ಪೂರು ಎಂಬ ಪುಟ್ಟ ಗ್ರಾಮದಲ್ಲಿ ನಡೆದಿದೆ. 

ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಸಂದೀಪ್‌ ದಕ್ಷ, “ಈ ಚಿತ್ರದ ಕ್ಲೈಮ್ಯಾಕ್ಸ್‌ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರದ ಪ್ರತಿ ಸನ್ನಿವೇಶಗಳೂ ಹೊಸತನದಿಂದ ಕೂಡಿವೆ. ಮನೆಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ ಇದಾ ಗಲಿದೆ’ ಎನ್ನುತ್ತಾರೆ. ನಿರ್ಮಾಪಕ ಮಹದೇವಗೌಡ ಅವರು ಮೂಲತಃ ಗಾರೆ ಕೆಲಸಗಾರರಂತೆ.  ಸಂದೀಪ್‌ ಅವರು ಚಿತ್ರೀಕರಣಕ್ಕೆ ಬಂದಾಗ ಅವರ ಪರಿಚಯವಾಗಿ, ಗೆಳೆತನ ಬೆಳೆದು ಈಗ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟಿಸಿರುವ ನವೀನ್‌ ಕೃಷ್ಣ, ರೋಹಿಣಿ, ರಶ್ಮಿ ಸೇರಿದಂತೆ ಚಿತ್ರತಂಡದ ಪ್ರತಿಯೊಬ್ಬರು ಅನಿಸಿಕೆ ಹಂಚಿ ಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next