Advertisement

ದಾನಗಳಲ್ಲಿ ರಕ್ತದಾನವೇ ಶ್ರೇಷ್ಠ: ಶಿರಹಟ್ಟಿ

06:18 PM Apr 27, 2020 | Suhan S |

ರಾಣಿಬೆನ್ನೂರ: ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನವಾಗಿದ್ದು, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಕ್ತದ ದಾಸ್ತಾನಿನಲ್ಲಿ ಹೇರಳ ಕೊರತೆ ಇದೆ. ಇದನ್ನು ನೀಗಿಸಲು ಈ ಶಿಬಿರ ಸಹಾಯಕವಾಗಲಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಹೇಳಿದರು.

Advertisement

ನಗರದ ಸಾಯಿ ಸ್ಪೆಷಾಲಿಟಿ ಆಸ್ಪತ್ರೆಯ ಬ್ಲಿಡ್‌ ಬ್ಯಾಂಕ್‌ನಲ್ಲಿ ಆವರಣದಲ್ಲಿ ಕರ್ನಾಟಕ ಸಂಘ, ಎಂಜಿನಿಯರ್ ಸಂಘ, ತಾಲೂಕು ಆರ್ಯವೈಶ್ಯ ಸಂಘ ಹಾಗೂ ನಗರದ ಬ್ಲಿಡ್‌ ಬ್ಯಾಂಕ್‌ ಸಹಭಾಗಿತ್ವದಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ತಾಲೂಕು ಆರ್ಯವೈಶ್ಯ ಸಂಘದ ಅಧ್ಯಕ್ಷ ಎಲ್‌.ಜಿ. ಶೆಟ್ರ ಶಿಬಿರ ಉದ್ಘಾಟಿಸಿದರು.

31 ಮಂದಿ ರಕ್ತದಾನ ಮಾಡಿದರು. ಕೆ.ಎನ್‌. ಷಣ್ಮುಖ, ಕೆ.ಎಸ್‌. ಪ್ರಸಾದ, ಶ್ರೀಧರ ಜಿ.ಆರ್‌., ಶ್ರೀನಿವಾಸ ಏಕಬೋಟೆ, ವಿನಾಯಕ ಜೋಶಿ, ಸತ್ಯನಾರಾಯಣ ವಿಶ್ವರೂಪ, ಸದಾನಂದ ರಾಮಗಿರಿ, ಕರಿಬಸವರಾಜ ಆಲದಕಟ್ಟಿ, ಸೀತಾರಾಂ ಕಣೇಕಲ್‌, ಸಂದೀಪ ರೂಪನಗುಡಿ, ಸತ್ಯನಾರಾಯಣ ವಿಶ್ವರೂಪ, ಚಿದಂಬರ ಜೋಶಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next