Advertisement

ಅಧಿಕಾರಿಗಳಿಗೆ ಛೀಮಾರಿ ಹಾಕಿ: ಈಶ್ವರಪ್ಪ

11:25 AM Jun 15, 2017 | Team Udayavani |

ವಿಧಾನ ಪರಿಷತ್ತು: ರೈತರಿಗೆ ಬೆಳೆ ಪರಿಹಾರ ವಿತರಣೆಯಲ್ಲಿ ಒಂದು ಪೈಸೆಯೂ ವ್ಯತ್ಯಾಸವಾಗಿಲ್ಲ. ಬಾಕಿಯಿರುವ 155 ಕೋಟಿ ರೂ.ಅನುದಾನವನ್ನು ಜಿಲ್ಲಾಧಿಕಾರಿಗೆ ರವಾನಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.

Advertisement

ಸದನದಲ್ಲಿ ಬುಧವಾರ ಪ್ರಶ್ನೋತ್ತರ ಕಲಾಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಮಾತನಾಡಿ, “ಕೇಂದ್ರ ಸರ್ಕಾರ 1685 ಕೋಟಿ ರೂ.ಪರಿಹಾರ ಮೊತ್ತವನ್ನು ಡಿಸೆಂಬರ್‌ನಲ್ಲೇ ಬಿಡುಗಡೆ ಮಾಡಿದ್ದು, ಆರು ತಿಂಗಳಾದರೂ ಪರಿಹಾರ ವಿತರಿಸದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ತೋರಿಸುತ್ತದೆ. ಬ್ಯಾಂಕ್‌ ಖಾತೆ ಖಾತರಿಪಡಿಸಿಕೊಳ್ಳಲು, ಆಧಾರ್‌ ಕಾರ್ಡ್‌ ಲಿಂಕ್‌ ಮಾಡಲು ಆರು ತಿಂಗಳು ಬೇಕೆ. ನೀವು ಅಧಿಕಾರಿಗಳಿಗೆ ಛೀಮಾರಿ ಹಾಕಿ ನಿಮ್ಮ ಭಾಷೆಯಲ್ಲಿ ಎಚ್ಚರಿಕೆ ನೀಡಿ. ಕಾಲಮಿತಿಯೊಳಗೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು. ಇದಕ್ಕೆ ದನಿಗೂಡಿಸಿದ ಟಿ.ಎ.ಶರವಣ, ಬಾಕಿ ಉಳಿದ ರೈತರಿಗೆ ಬರ ಪರಿಹಾರ ವಿತರಿಸಲು ಕಾಲಮಿತಿ ನಿಗದಿಪಡಿಸಲಾಗಿದೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ, ” ಕೂಡಲೇ ರೈತರ ಅಕೌಂಟ್‌ ವಿವರ, ಆಧಾರ್‌ ಲಿಂಕ್‌ ಇತರೆ ಪರಿಶೀಲನೆ ನಡೆಸಿ ಪರಿಹಾರ ವಿತರಿಸಲು ಸೂಚಿಸಲಾಗಿದೆ. ಒಂದೊಮ್ಮೆ ಅಕೌಂಟ್‌ ವಿವರ ಸರಿಯಾಗಿ ಸಿಗದಿದ್ದರೆ ರೈತರಿಗೆ ಖುದ್ದಾಗಿ ಪರಿಹಾರ ಚೆಕ್‌ ವಿತರಿಸಲು ಸೂಚನೆ ನೀಡಲಾಗಿದೆ. ತಿಂಗಳಲ್ಲಿ ಬೆಳೆ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು

Advertisement

Udayavani is now on Telegram. Click here to join our channel and stay updated with the latest news.

Next