Advertisement

Black Magic; ಹೊಳೆಹೊನ್ನೂರು: ತಾತ್ಕಾಲಿಕ ಪತ್ರಿಕಾ ಭವನಕ್ಕೆ ವಾಮಾಚಾರ !

03:08 PM Aug 16, 2023 | Team Udayavani |

ಹೊಳೆಹೊನ್ನೂರು: ಪಟ್ಟಣದ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ತಾತ್ಕಾಲಿಕ ಘಟಕಕ್ಕೆ ವಾಮಾಚಾರ ಮಾಡಲಾಗಿದೆ.

Advertisement

ಆ.15ರ ಮಂಗಳವಾರ ರಾತ್ರಿ ಅಮಾವಾಸ್ಯೆಯ ಪ್ರಯುಕ್ತ ವಾಮಾಚಾರ ಮಾಡಿಸಿಕೊಂಡು ಬಂದು ಪತ್ರಿಕಾ ಭವನದ ಮುಖ್ಯದ್ವಾರದ ಬಳಿ ಬಂದು ಎರಡು ಕಡೆಗಳಲ್ಲಿ ಅರಿಶಿಣ ಕುಂಕುಮ ಮಿಶ್ರಿತ ನಿಂಬೆಹಣ್ಣು ಬಿಸಾಡಿ ಹೋಗಿದ್ದಾರೆ.

ಪಟ್ಟಣದ ಘಟಕ ಕೇವಲ 5 ತಿಂಗಳಿಂದ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ಕೆಲಸದಲ್ಲಿ ತೊಡಗಿರುವ ಪತ್ರಿಕೆಗಳು ಸಮಾಜದಲ್ಲಿ ತನ್ನದೇ ಆದ ಗೌರವ ಹೊಂದಿದ್ದು, ಇಂದಿನ ದೃಶ್ಯ ಮಾಧ್ಯಮಗಳ ಪೈಪೋಟಿಯಿಂದಾಗಿ ಪತ್ರಿಕೆ ತನ್ನದೇ ಛಾಪು ಮೂಡಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪತ್ರಿಕಾ ಭವನಕ್ಕೆ ಮಾಟ ಮಂತ್ರದಂತಹ ಮಾನದಂಡ ಅನುಸರಿಸುತ್ತಿರುವುದು ವಿಪರ್ಯಸವಾಗಿದೆ.

ಇಂತಹ ಹೇಯ ಕೃತ್ಯಗಳಿಂದಾಗಿ ಸಮಾಜದಲ್ಲಿ ತಲೆತಗ್ಗಿಸುವ ಕೆಲಸವಾಗುತ್ತಿವೆ. ಆದ್ದರಿಂದ ಇದನ್ನು ಯಾರು ಮಾಡುತ್ತಾರೋ ಹಾಗೂ ಯಾರು ಮಾಡಿಸುತ್ತಿದ್ದಾರೋ ಅಂತಹವರಿಗೆ ಆ ದೇವರೇ ಶಿಕ್ಷೆ ವಿಧಿಸಲಿ ಹಾಗೂ ಇಂತಹ ಮೂಢನಂಬಿಕೆಯಿಂದ ಸಮಾಜವನ್ನು ಒಳ್ಳೆಯ ಮನಸ್ಥಿಗೆ ತರುವಂತಹ ಕೆಲಸವಾಗಬೇಕಾಗಿದೆ ಎಂಬುದು ಪತ್ರಿಕಾ ಭವನದ ಆಶಯವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next