Advertisement

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ವಜಾ

01:20 AM Jul 31, 2019 | mahesh |

ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳ ವ್ಯಾಪ್ತಿ ಯಲ್ಲಿ ಬರುವ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರನ್ನೂ ವಜಾಗೊಳಿಸುವ ಮೂಲಕ ಕಾಂಗ್ರೆಸ್‌ ಅನರ್ಹ ಶಾಸಕರ ಹಿಂಬಾಲಕರನ್ನು ಹುದ್ದೆಯಿಂದ ತೆರವು ಗೊಳಿಸಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲಾ ಘಟಕದ ವ್ಯಾಪ್ತಿಯ ಚಿಕ್ಕಬಳ್ಳಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೃಷ್ಣ ಮೂರ್ತಿ, ಮಂಚೇನಹಳ್ಳಿ-ಎಂ ನಾರಾಯಣ ಸ್ವಾಮಿ, ಬೆಂಗಳೂರು ಉತ್ತರ ಜಿಲ್ಲೆ ವ್ಯಾಪ್ತಿಯ ಕೆ.ಆರ್‌.ಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ-ಎಂ. ಮುನೇಗೌಡ, ಉದಯಪುರ-ಜಿ.ವಿ. ಮನೋಜ್‌ಕುಮಾರ್‌, ಯಶವಂತಪುರ ವಿಧಾನಸಭೆ ವ್ಯಾಪ್ತಿಯ ಹಾರೋಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ- ಬಿ. ಅನಿಲ್ಕುಮಾರ್‌, ಕೆಂಗೇರಿ-ಕೆ.ಆರ್‌.ಮೂರ್ತಿ, ರಾಜರಾಜೇಶ್ವರಿ ನಗರ ವಿಧಾನಸಭೆ ವ್ಯಾಪ್ತಿಯ ಆರ್‌.ಆರ್‌. ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ -ರವಿಗೌಡ, ಯಶವಂತಪುರ-ವೇಲು ನಾಯ್ಕರ್‌, ಬೆಂಗಳೂರು ಕೇಂದ್ರ ಜಿಲ್ಲೆಯ- ಶಿವಾಜಿನಗರ ವಿಧಾನಸಭೆಯ-ಸಂಪಂಗಿರಾಮ್‌ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ-ಸಿ.ಕೃಷ್ಣೇಗೌಡ, ಭಾರತಿನಗರ-ಜಿ.ರಾಜೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ-ಹೊಸಕೋಟೆ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ -ಎಸ್‌.ಅರುಣ್‌ ಕುಮಾರ್‌, ಸೂಲಿಬೆಲೆ ನಂದಗುಡಿ-ಆರ್‌.ರವೀಂದ್ರ, ಜಡಿಗೇನಹಳ್ಳಿ- ಅನುಗೋಡನಹಳ್ಳಿ-ಬಿ. ರಘುವೀರ್‌.

ಚಿಕ್ಕೋಡಿ ಜಿಲ್ಲಾ ಘಟಕದ ಅಥಣಿ ವಿಧಾನಸಭೆ- ಅಥಣಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ-ಅರ್ಶದ್‌ ಜಿಸೇಮ್‌ ಅಬ್ದುಲ್ ಗದ್ದಲ್, ತೆಲಸಂಗ- ಶಾಮರಾವ್‌ ಪೂಜಾರಿ, ಬೆಳಗಾವಿ ಗ್ರಾಮಾಂತರ ಡಿಸಿಸಿ- ಗೋಕಾಕ್‌ ವಿಧಾನಸಭೆ-ಗೋಕಾಕ್‌ ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ -ಎಸ್‌.ಎಸ್‌.ಶೇಖ್‌, ಗೋಕಾಕ್‌ ಗ್ರಾಮಾಂತರ-ಮಾರುತೆಪ್ಪ ನಿರ್ವಾಣಿ, ಉತ್ತರ ಕನ್ನಡ ಡಿಸಿಸಿ-ಯಲ್ಲಾಪುರ ವಿಧಾನಸಭೆಯ-ಯಲ್ಲಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ.ವಿ.ಜೋಶಿ, ಮುಂಡಗೋಡ್‌-ರವಿಗೌಡ ಪಾಟೀಲ್, ಹಾವೇರಿ ಡಿಸಿಸಿ- ಹಿರೆಕೆರೂರು ವಿಧಾನಸಭೆ-ಹಿರೆಕೆರೂರು ಬ್ಲಾಕ್‌ ಕಾಂಗ್ರೆಸ್‌-ಕರೇಗೌಡ ಸಣ್ಣಕ್ಕಿ, ರಟ್ಟಿಹಳ್ಳಿ-ಆರ್‌.ಎನ್‌.ಗಂಗೊಳ, ಬಳ್ಳಾರಿ ಗ್ರಾಮಾಂತರ ಡಿಸಿಸಿ-ವಿಜಯನಗರ ವಿಧಾನಸಭೆ-ಹೊಸಪೇಟೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ-ಎಂ.ರಫೀಕ್‌, ಕಮಲಾಪುರ-ಅಮ್ಮಾಜಿ ಹೇಮಣ್ಣ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next