Advertisement

ಸಿಗಂದೂರು ದೇವಸ್ಥಾನಕ್ಕೆ ರಚಿಸಿದ ಸಮಿತಿ ಹಿಂದೆ ಹಿಂದುತ್ವವಾದಿಗಳ ಕೈವಾಡ: ಬಿ.ಕೆ.ಹರಿಪ್ರಸಾದ್

04:51 PM Nov 06, 2020 | sudhir |

ಶಿವಮೊಗ್ಗ : ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಕ್ಷುಲ್ಲಕ ಕಾರಣಕ್ಕೆ ಮೇಲುಸ್ತುವಾರಿ ಸಮಿತಿಯನ್ನು ರಚಿಸಲಾಗಿದೆ, ಇದರ ಹಿಂದೆ ಹಿದುತ್ವವಾದಿಗಳ ಕೈವಾಡವಿದೆ ಎಂದು ರಾಜ್ಯಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

Advertisement

ಸಿಗಂದೂರು ದೇವಸ್ಥಾನಕ್ಕೆ ಸರಕಾರ ರಚಿಸಿದ ಸಮಿತಿಯ ಕುರಿತು ಮಾತನಾಡಿದ ಹರಿಪ್ರಸಾದ್ ಸಮಿತಿ ರಚನೆ ಕೇವಲ ಸಿಗಂದೂರು ದೇವಸ್ಥಾನಕ್ಕೆ ಮಾತ್ರ ಅನ್ವಯಿಸಲಿದೆಯೇ ಅಥವಾ ರಾಜ್ಯದ ಇತರ ದೇವಸ್ಥಾನಗಳಿಗೂ ಅನುಸರಿಸುತ್ತಾ ಎಂದು ಗುಡುಗಿದ್ದಾರೆ.

ಹಿಂದೂ ಧರ್ಮದಲ್ಲಿದ್ದುಕೊಂಡು ಶೂದ್ರ ಸಂಸ್ಕೃತಿಯನ್ನು ಅನುಸರಿಸಿಕೊಂಡು ಬರುತ್ತಿರುವವರನ್ನು ಸರ್ಕಾರ ಗುರಿಯಾಗಿಸಿಕೊಂಡಿದೆ ಈ ಸಮಿತಿ ಹಿಂದೆ ಹಿಂದುತ್ವವಾದಿಗಳ ಕೈವಾಡ ಇದೆ. ಮಾನಸಿಕವಾಗಿ ಗಟ್ಟಿಯಾಗಿರುವ ಹಿಂದುಳಿದ ಶೂದ್ರರ ಹುಟ್ಟಡಗಿಸಲು ಹಿಂದುತ್ವವಾದಿಗಳು ಮುಂದಾಗಿದ್ದಾರೆ ಶೀಘ್ರವೇ ಸಮತಿ ರಚನೆಯನ್ನು ಹಿಂತೆಗೆದುಕೊಂಡು ಹಿಂದಿನಂತೆ ನಡೆಯಲು ಅವಕಾಶ ಮಾಡಿಕೊಡಬೇಕು ಇಲ್ಲದಿದ್ದಲ್ಲಿ ಶಿವಮೊಗ್ಗದಿಂದ ಬೆಂಗಳೂರು ತನಕ ಪಾದಯಾತ್ರೆ ನಡೆಸುತ್ತೇವೆ ಎಂದು ಎಚ್ಚರಿಕೆಯನ್ನು ನೀಡಿದರು.

ಇದನ್ನೂ ಓದಿ : ಚಿಕ್ಕಮಗಳೂರು : ಸಿಎಂ ಬೆಂಗಾವಲು ವಾಹನ ಪಲ್ಟಿ! ಇಬ್ಬರು ಸಿಬ್ಬಂದಿಗೆ ಗಾಯ

Advertisement

Udayavani is now on Telegram. Click here to join our channel and stay updated with the latest news.

Next