Advertisement

LS poll results ಆಪ್ ಸರಕಾರ ತೆಗೆದುಹಾಕಲು ಉತ್ಸಾಹ ಹೆಚ್ಚಿಸಿದೆ: ವೀರೇಂದ್ರ ಸಚ್‌ದೇವ್

12:27 PM Jul 06, 2024 | Team Udayavani |

ಹೊಸದಿಲ್ಲಿ: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರವನ್ನು ತೆಗೆದುಹಾಕಲು ದೆಹಲಿಯಲ್ಲಿ ಇತ್ತೀಚಿನ ಲೋಕಸಭಾ ವಿಜಯದ ನಂತರ ಬಿಜೆಪಿ ನಾಯಕರು, ಕಾರ್ಯಕರ್ತರ ಉತ್ಸಾಹ ಮತ್ತು ಸಂಕಲ್ಪ ದ್ವಿಗುಣಗೊಂಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವೀರೇಂದ್ರ ಸಚ್‌ದೇವ್ ಶನಿವಾರ ಹೇಳಿದ್ದಾರೆ.

Advertisement

ಭಾರತೀಯ ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಅವರ 123ನೇ ಜನ್ಮದಿನದಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ, ಭಾನುವಾರ ನಡೆಯಲಿರುವ ಪಕ್ಷದ ವಿಸ್ತೃತ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದೆಹಲಿ ವಿಧಾನಸಭಾ ಚುನಾವಣೆಯ ಕುರಿತು ಪಕ್ಷವು ಚರ್ಚಿಸಲಿದೆ ಎಂದು ಸಚ್‌ದೇವ್ ಹೇಳಿದರು.

ಸದ್ಯ ದೆಹಲಿ ವಿಧಾನಸಭೆಯಲ್ಲಿ ಬಿಜೆಪಿ ಕೇವಲ 8 ಶಾಸಕರನ್ನು ಹೊಂದಿದೆ. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ 61 ಶಾಸಕರನ್ನು ಹೊಂದಿದೆ.

ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡ ಹೊರತಾಗಿಯೂ 7 ಕ್ಕೆ 7 ಸ್ಥಾನಗಳನ್ನೂ ಬಿಜೆಪಿ ಗೆದ್ದುಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next