Advertisement

ರಾಜ್ಯಸಭೆ ಚುನಾವಣೆಗೆ ಬಿಜೆಪಿ ಪಟ್ಟಿ ಸಿದ್ಧ; ಐವರ ಹೆಸರು ಅಂತಿಮ

12:23 AM Jun 07, 2020 | Sriram |

ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಬಿಜೆಪಿಯಿಂದ ರಮೇಶ್‌ ಕತ್ತಿ, ಪ್ರಭಾಕರ್‌ ಕೊರೆ ಹಾಗೂ ಪ್ರಕಾಶ್‌ ಶೆಟ್ಟಿಯವರ ಹೆಸರನ್ನು ಅಂತಿಮಗೊಳಿಸಿ, ಕೇಂದ್ರ ಚುನಾವಣಾ ಸಮಿತಿಗೆ ಸಲ್ಲಿಸಿದ್ದು, ಭಾನುವಾರ ಸಂಜೆ ಇಬ್ಬರ ಹೆಸರು ಘೋಷಣೆಯಾಗುವ ಸಾಧ್ಯತೆಯಿದೆ.

Advertisement

ಶನಿವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ನೇತೃತ್ವದಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಬೆಳಗಾವಿ ಮೂಲದ ರಮೇಶ್‌ ಕತ್ತಿ, ಪ್ರಭಾಕರ್‌ ಕೊರೆ ಹಾಗೂ ಕರಾವಳಿ ಮೂಲದ ಪ್ರಕಾಶ್‌ ಶೆಟ್ಟಿಯವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಈ ಮೂವರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ನೀಡಲು ಕೋರ್‌ ಕಮಿಟಿಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಜೆಪಿ ಮೂಲಗಳು ಖಚಿತಪಡಿಸಿವೆ.

ರಾಜ್ಯ ಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ಸುಧೀಘವಾದ ಚರ್ಚೆ ನಡೆದು ಪ್ರೊ.ಎನ್‌.ನಾಗರಾಜ್‌, ನಿರ್ಮಲ್‌ ಕುಮಾರ್‌ ಸುರಾನಾ, ಡಾವಿಜಯ್‌ ಸಂಕೇಶ್ವರ್‌ ಮೊದಲಾದವರ ಹೆಸರುಗಳು ಚರ್ಚೆಗೆ ಬಂದಿದೆ. ಅಂತಿಮವಾಗಿ ರಮೇಶ್‌ ಕತ್ತಿ, ಪ್ರಭಾಕರ್‌ ಕೊರೆ ಹಾಗೂ ಪ್ರಕಾಶ್‌ ಶೆಟ್ಟಿಯ ಹೆಸರನ್ನು ಕೇಂದ್ರಕ್ಕೆ ಕಳುಹಿಸಲು ತೀರ್ಮಾನ ತೆಗೆದುಕೊಂಡಿದ್ದಾರೆ.

ಕೆ.ವಿ.ಕಾಮತ್‌ ಹಾಗೂ ಮುರಳೀಧರ್‌ ರಾವ್‌ ಅವರ ಹೆಸರು ಕೂಡ ಕೋರ್‌ ಕಮಿಟ್‌ಯಲ್ಲಿ ಚರ್ಚೆಗೆ ಬಂದಿಲ್ಲ. ಈ ಎರಡು ಹೆಸರುಗಳಲ್ಲಿ ಯಾವರನ್ನಾದರೂ ಒಬ್ಬರನ್ನು ಕೇಂದ್ರ ಸಮಿತಿಯೇ ಅಂತಿಮ ಗೊಳಿಸಿದರೂ, ಅದನ್ನು ಯಾವುದೇ ಅಸಮಾಧಾನವಿಲ್ಲದೆ ಒಪ್ಪಿಕೊಳ್ಳಲಾಗುವುದು. ರಾಜ್ಯದಿಂದ ಹೋಗಿರುವ ಮೂವರಲ್ಲಿ ಯಾರನ್ನು ಕೇಂದ್ರ ಸಮಿತಿ ಅಂತಿಮಗೊಳಿಸುತ್ತದೆ ಎಂಬುದು ತಿಳಿದಿಲ್ಲ. ಆದರೆ, ಕೇಂದ್ರದಿಂದ ಬೇರೆ ಹೆಸರನ್ನು ಶಿಫಾರಸ್ಸು ಮಾಡಿದ್ದರೂ, ಒಪ್ಪಿಕೊಳ್ಳಲೇ ಬೇಕಾಗುತ್ತದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಅಂತಿಮಗೊಳಿಸಿರುವುದು, ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸ್ಪರ್ಧೆ ಮಾಡುವ ಕುರಿತ ಪ್ರಸ್ತಾಪಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು ಎಂದು ಹೇಳಲಾಗಿದೆ.

Advertisement

ಸಚಿವರಾದ ಜಗದೀಶ್‌ ಶೆಟ್ಟರ್‌, ಆರ್‌. ಅಶೋಕ್‌, ಸಿ.ಟಿ.ರವಿ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ್‌ ಲಿಂಬಾವಳಿ, ಎನ್‌.ರವಿಕುಮಾರ್‌, ಸಂಘಟನಾ ಕಾರ್ಯದರ್ಶಿ ಅರುಣ್‌ ಕುಮಾರ್‌ ಮೊದಲಾದವರು ಕೋರ್‌ ಕಮಿಟಿ ಸಭೆಯಲ್ಲಿದ್ದರು.

ಮತ್ತಿಬ್ಬರ ಹೆಸರು ಸೇರ್ಪಡೆ
ಈ ಮೂವರು ಅಭ್ಯರ್ಥಿಗಳ ಜತೆಗೆ ಪಕ್ಷ ಸಂಘಟನೆಯ ದೃಷ್ಟಿಯಿಂದ ನಿರ್ಮಲ್‌ ಕುಮಾರ್‌ ಸುರಾನಾ ಮತ್ತು ಡಾ| ಎಂ. ನಾಗರಾಜ ಅವರ ಹೆಸರನ್ನು ಸೇರಿ ಸ ಬೇಕು ಎಂಬ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಐವರ ಹೆಸರನ್ನು ಕೇಂದ್ರ ಚುನಾವಣ ಸಮಿತಿಗೆ ಸಲ್ಲಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸುರಾನಾ ಮತ್ತು ಡಾ| ಎಂ. ನಾಗರಾಜ ಅವರ ಹೆಸರನ್ನು ಸೇರಿಸಿ ಕಳುಹಿಸಬೇಕು ಎಂದು ಒತ್ತಡ ಬಂದ ಹಿನ್ನೆಲೆಯಲ್ಲಿ ಐವರ ಹೆಸರಿರುವ ಅಂತಿಮ ಪಟ್ಟಿಯನ್ನು ಕೇಂದ್ರ ಚು. ಸಮಿತಿಗೆ ಸಲ್ಲಿಸಲು ನಿರ್ಧರಿಸಲಾಗಿದೆ. ಆದರೆ ಪ್ರಕಾಶ್‌ ಶೆಟ್ಟಿ ಆಯ್ಕೆ ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next