Advertisement

ಕೋಲ್ಕತಾ: ಸಿಎಎ ಪರ Rally, ಬಿಜೆಪಿ ಮುಖಂಡ ಕೈಲಾಶ್, ಮುಕುಲ್ ಪೊಲೀಸ್ ವಶಕ್ಕೆ

09:58 AM Feb 08, 2020 | Team Udayavani |

ಕೋಲ್ಕತಾ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ರಾಲಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹಾಗೂ ಹಿರಿಯ ಬಿಜೆಪಿ ಮುಖಂಡ ಮುಕುಲ್ ರಾಯ್ ಅವರನ್ನು ಶುಕ್ರವಾರ ದಕ್ಷಿಣ ಕೋಲ್ಕತಾ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

Advertisement

ನಾವು ಪೊಲೀಸರಿಂದ ಇಂತಹ ನಡವಳಿಕೆ ನಿರೀಕ್ಷಿಸಿರಲಿಲ್ಲ. ನಾವು ಸಿಎಎ ಪರ ರಾಲಿಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದಾಗಲೇ ಬಂಧಿಸಿದ್ದಾರೆ. ಇದು ಅಸಾಂವಿಧಾನಿಕ ಕ್ರಮ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಿಎಎಗೆ ಬೆಂಬಲ ನೀಡಿದ್ದೇವೆ. ಇಡೀ ದೇಶವೇ ಬೆಂಬಲ ನೀಡಿದೆ. ನಾವು ಪಶ್ಚಿಮಬಂಗಾಳ ಸರ್ಕಾರದ ಕ್ರಮ ಖಂಡಿಸುತ್ತೇವೆ ಎಂದು ವಿಜಯವರ್ಗೀಯ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏತನ್ಮಧ್ಯೆ ನಾವು ಬಿಜೆಪಿ ಮುಖಂಡರನ್ನು ಬಂಧಿಸಿಲ್ಲ, ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next