Advertisement

ನಾಲಗೆಯ ಮೇಲೆ ನಿಯಂತ್ರಣವಿರಬೇಕು’: ಮಹುವಾ ಮೊಯಿತ್ರಾಗೆ ಹೇಮಾ ಮಾಲಿನಿ

02:40 PM Feb 08, 2023 | Team Udayavani |

ನವದೆಹಲಿ: ಲೋಕಸಭೆಯಲ್ಲಿ ಮಂಗಳವಾರ (ಫೆ 7) ಬಜೆಟ್ ಅಧಿವೇಶನದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾ ಅವರು ಆಕ್ಷೇಪಾರ್ಹ ಪದ ಬಳಕೆಯಿಂದಾಗಿ ತೀವ್ರ ಆಕ್ರೋಶ ಎದುರಿಸಿಸಿದ್ದು ವೀಡಿಯೋವೊಂದರಲ್ಲಿ, ಮೊಯಿತ್ರಾ ಅವರು ತಮ್ಮ ಭಾಷಣದ ವೇಳೆ ಬಿಜೆಪಿ ಸಂಸದ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ಆಕ್ಷೇಪಾರ್ಹ ಪದವನ್ನು ಹೇಳುತ್ತಿರುವುದು ಕೇಳಿಬಂದಿದೆ.

Advertisement

ಆಕೆಯ ವರ್ತನೆಯನ್ನು ಟೀಕಿಸಿದ ಹಲವು ಬಿಜೆಪಿ ಸಂಸದರು ಈ ವಿಡಿಯೋವನ್ನು  ಹಂಚಿಕೊಂಡಿದ್ದಾರೆ. ಇದರ ಜೊತೆಗೆ, ಬಿಜೆಪಿ ಸಂಸದೆ ಮತ್ತು ನಟಿ ಹೇಮಾ ಮಾಲಿನಿ ಕೂಡ ಮೊಯಿತ್ರಾ ಅವರ ಅಸಭ್ಯ ಭಾಷೆಯ ಬಳಕೆಗಾಗಿ ವಾಗ್ದಾಳಿ ನಡೆಸಿದ್ದು, ನಾಲಗೆಯ ಮೇಲೆ ನಿಯಂತ್ರಣವಿರಬೇಕು ಎಂದು ಕಿಡಿ ಕಾರಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಬುಧವಾರ ಸಂಸತ್ತಿನಲ್ಲಿ ಬಿಜೆಪಿಯ ರಮೇಶ್ ಬಿಧುರಿ ವಿರುದ್ಧ ನೀಡಿದ ಹೇಳಿಕೆಗಾಗಿ ಕ್ಷಮೆಯಾಚಿಸುವಂತೆ ಮತ್ತು ಅವರ ವಿರುದ್ಧ ಕ್ರಮಕ್ಕಾಗಿ ಕರೆಗಳ ನಡುವೆಯೇ ನಾನು ನನ್ನ ಹೇಳಿಕೆಗಳಿಗೆ ಬದ್ದವಾಗಿದ್ದೇನೆ ಎಂದಿದ್ದಾರೆ.

ಅವರ ಹೇಳಿಕೆಗಳ ನಂತರ ವಿವಾದ ಭುಗಿಲೆದ್ದ ಒಂದು ದಿನದ ನಂತರ “ನಾನು ಆ್ಯಪಲ್,ಆ್ಯಪಲ್ ಎಂದು ಕರೆದಿದ್ದೇನೆ ಮತ್ತು ನಾನು ಅದಕ್ಕೆ ಬದ್ಧಳಾಗಿದ್ದೇನೆ” ಎಂದು ಅವರು ಸಂಸತ್ತಿನ ಹೊರಗೆ ಸುದ್ದಿಗಾರರಿಗೆ ಮಹುವಾ ಮೊಯಿತ್ರಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next