Advertisement

ಮೂಡಬಿದಿರೆಯಲ್ಲಿ  ಬಿಜೆಪಿಗೆ ಮೊದಲ ಗೆಲುವು !

06:45 AM May 16, 2018 | Team Udayavani |

ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ಬಿಜೆಪಿಗೆ ಖಾತೆ ತೆರೆಯುವ ಮೂಲಕ ಮೊದಲ ಗೆಲುವು ತಂದು ಕೊಟ್ಟ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ. ಅಷ್ಟೇ ಅಲ್ಲ ಬಿಜೆಪಿ ಪಾಲಿಗೆ ಈ ಕ್ಷೇತ್ರದ ಗೆಲುವು ಡಬಲ್‌ ಧಮಾಕ ಕೂಡ ಹೌದು.

Advertisement

ಮೂಡಬಿದಿರೆ ಕ್ಷೇತ್ರದಲ್ಲಿ ಬಿಜೆಪಿ ಯಾವತ್ತೂ ಗೆಲುವು ಸಾಧಿಸಿರಲಿಲ್ಲ. ಈ ಕಾರಣಕ್ಕೆ ಮೂಡಬಿದಿರೆಯಲ್ಲಿ ಎರಡು ವಿಧಗಳಲ್ಲಿ ಬಿಜೆಪಿ ತನ್ನ ಮೊದಲ ಜಯ ದಾಖಲಿಸಿಕೊಂಡಿದೆ. ರಾಜ್ಯದ 222 ಕ್ಷೇತ್ರಗಳ ಪೈಕಿ ಮೂಡಬಿದಿರೆಯ ಫಲಿತಾಂಶ ಮೊದಲು ಘೋಷಣೆಯಾಗಿದ್ದು, ಆದು ಬಿಜೆಪಿ ಪಾಲಿಗೆ ಮೊದಲ ಜಯ ಕೂಡ ಹೌದು. ಎರಡನೆಯದಾಗಿ ಮೂಡಬಿದಿರೆ ಕ್ಷೇತ್ರದ ಇತಿಹಾಸ ದಲ್ಲೇ ಬಿಜೆಪಿ ಮೊದಲ ಜಯ ಪಡೆದುಕೊಂಡು ಉಮಾನಾಥ ಕೋಟ್ಯಾನ್‌ ಅವರು ಕ್ಷೇತ್ರದ ಪಾಲಿಗೆ ಬಿಜೆಪಿಯ ಪ್ರಥಮ ಶಾಸಕರೆನಿಸಿಕೊಂಡಿದ್ದಾರೆ.

ಪ್ರಶಾಂತ ಪೂಜಾರಿ ಮನೆಗೆ ಕೋಟ್ಯಾನ್‌ ಭೇಟಿ
ಮೂಡಬಿದಿರೆ:
ಬಜರಂಗ ದಳ ಕಾರ್ಯಕರ್ತನಾಗಿದ್ದು  ದುಷ್ಕರ್ಮಿಗಳಿಂದ ಎರಡು ವರ್ಷಗಳ ಹಿಂದೆ ಕೊಲೆಗೀಡಾದ ಬಿರಾವು ಪರಿಸರದ ಪ್ರಶಾಂತ ಪೂಜಾರಿ ಅವರ ಮನೆಗೆ ನೂತನ ಶಾಸಕ ಉಮಾನಾಥ ಕೋಟ್ಯಾನ್‌ ಭೇಟಿ ನೀಡಿದರು.

ಪ್ರಶಾಂತ ಪೂಜಾರಿ ಅವರ ತಂದೆ, ಹೂವಿನ ವ್ಯಾಪಾರಿ ಆನಂದ ಪೂಜಾರಿ ಅವರನ್ನು ತಬ್ಬಿಕೊಂಡಾಗ ಆನಂದ ಪೂಜಾರಿ ಹಾಗೂ ಅವರ  ಪತ್ನಿ ಕಣ್ಣೀರ್ಗರೆದರು. ಕೋಟ್ಯಾನ್‌ ಅವರು ಪ್ರಶಾಂತ್‌ ಪೂಜಾರಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದು  ಶ್ರದ್ಧಾಂಜಲಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next