Advertisement

ಸಿ.ಎಂ ಯಡಿಯೂರಪ್ಪರವರನ್ನು ಕಡೆಗಣಿಸುವ ಪ್ರೆಶ್ನೆಯೇ ಇಲ್ಲ: ವಿ.ಮುರಳೀದರ್ ರಾವ್

09:50 AM Sep 30, 2019 | Team Udayavani |

ಮಂಗಳೂರು: ಅನರ್ಹ ಶಾಸಕರು ಈವರೆಗೆ ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ಪಕ್ಷದ ನಿಯಮ ಪ್ರಕಾರ ಸದಸ್ಯರಾದ ಬಳಿಕ ಅಭ್ಯರ್ಥಿಯ ಆಯ್ಕೆ ಪರಿಗಣನೆಗೆ ಬರುತ್ತದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ವಿ. ಮುರಳೀದರ್ ರಾವ್ ಅವರು ಹೇಳಿದರು.

Advertisement

ಮಂಗಳೂರಿನಲ್ಲಿಂದು ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಕ್ಷದ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಮುಂದಿನ ಉಪಚುನಾವಣೆಯ 15 ಸ್ಥಾನಗಳಿಗೆ ಅಭ್ಯರ್ಥಿ ಆಯ್ಕೆ ನಡೆಯಲಿದೆ. ಎಲ್ಲಾ 15 ಸ್ಥಾನಗಳಲ್ಲೂ ಬಿಜೆಪಿ ಅಭೂತಪೂರ್ವ ಜಯಗಳಿಸಲಿದೆ.

ಕರ್ನಾಟಕ ಬಿಜೆಪಿಯಲ್ಲಿ ಯಾವುದೇ ಗುಂಪುಗಳಾಗಿಲ್ಲ. ಬಿ. ಎಸ್ ಯಡಿಯೂರಪ್ಪ ಮತ್ತು ನಳೀನ್ ಕುಮಾರ್ ಕಟೀಲ್ ನಡುವೆ ವೈಮನಸ್ಸಿದೆ ಎಂಬುದು ಸತ್ಯಕ್ಕೆ ದೂರವಾದುದು. ಉಪಚುನಾವಣೆಗೆ ಈಗಲೂ ಕೂಡ ಸಿದ್ಧರಿದ್ದೇವೆ. ಬಿ.ಎಸ್. ಯೂಡಿಯುರಪ್ಪ ಅವರು ರಾಜ್ಯದ ಬಿಜೆಪಿಯ ಪರಮೋಚ್ಚ ನಾಯಕ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next