Advertisement

ದಲಿತರ ಎದೆ ಮೇಲೆ ಜಾತಿ ಚಿಹ್ನೆ: ಬಿಜೆಪಿ ವಿರುದ್ಧ ರಾಹುಲ್‌ ಕಿಡಿ

04:33 PM Apr 30, 2018 | udayavani editorial |

ಹೊಸದಿಲ್ಲಿ : ಮಧ್ಯಪ್ರದೇಶದಲ್ಲಿ ಪೊಲೀಸರ ಹುದ್ದೆಗೆ  ಆಯ್ಕೆಮಾಡುವಾಗ ದಲಿತ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವ ವೇಳೆ ಅವರ ಎದೆಯ ಮೇಲೆ ಅವರ ಜಾತಿ ಗುರುತು ಹಾಕಲಾದ ಈಚಿನ ವಿದ್ಯಮಾನಕ್ಕೆ ಅತ್ಯುಗ್ರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಇದಕ್ಕಾಗಿ ಆರ್‌ಎಸ್‌ಎಸ್‌ ಮತ್ತು  ಬಿಜೆಪಿಯನ್ನು ಖಂಡಿಸಿದ್ದಾರೆ.

Advertisement

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಜಾತೀಯ ಮನೋಭಾವವವು ದೇಶದ ಹೃದಯವನ್ನು ಇರಿದಿದೆ. ಮಧ್ಯಪ್ರದೇಶದ ದಲಿತ ಯುವಕರ ಎದೆಯ ಮೇಲೆ ಜಾತಿ ಗುರುತನ್ನು ಹಾಕುವ ಮೂಲಕ ಬಿಜೆಪಿ, ಆರ್‌ಎಸ್‌ಎಸ್‌ ದೇಶದ ಸಂವಿಧಾನದ ಮೇಲೆ ದಾಳಿ ನಡೆಸಿದೆ ಎಂದು ರಾಹುಲ್‌ ಗುಡುಗಿದ್ದಾರೆ. 

ಇದು ಆರ್‌ಎಸ್‌ಎಸ್‌, ಬಿಜೆಪಿಯ ಸಿದ್ಧಾಂತವಾಗಿದೆ. ಇಂತಹ ಆಲೋಚನೆಯ ಫ‌ಲವಾಗಿಯೇ ದಲಿತ ಯುವಕರು ತಮ್ಮ ಕುತ್ತಿಗೆಗೆ ಹಾಂಡಿಯನ್ನು ಬಿಗಿದುಕೊಳ್ಳುವುದು, ತಮ್ಮ ದೇಹಕ್ಕೆ ಪೊರಕೆ ಕಟ್ಟಿಕೊಳ್ಳುವುದು; ಅವರು ದೇವಸ್ಥಾನಗಳನ್ನು ಪ್ರವೇಶಿಸದಂತೆ ಮಾಡುವುದು ಕಂಡು ಬರುವಂತಾಗಿದೆ; ಇಂತಹ ಸಿದ್ಧಾಂತಿಗಳನ್ನು ನಾವು ಸೋಲಿಸಲೇಬೇಕಾಗಿದೆ ಎಂದು ರಾಹುಲ್‌ ಟ್ಟಿಟರ್‌ನಲ್ಲಿ  ಬರೆದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next