Advertisement

ಯುವತಿ ಆತ್ಮಹತ್ಯೆ: ಬಿಜೆಪಿ ಮುಖಂಡನ ಸೆರೆ

07:20 AM Jan 09, 2018 | |

ಮೂಡಿಗೆರೆ: ಯಾದವ್‌ ಸುವರ್ಣ ಮತ್ತು ಸರಸ್ವತಿ ದಂಪತಿಯ ಪುತ್ರಿ ಧನ್ಯಾ (20) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ
ದಂತೆ ಮೂಡಿಗೆರೆ ಪೊಲೀಸರು ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಅನಿಲ್‌ ಎಂಬಾತನನ್ನು ಬಂಧಿಸಿದ್ದಾರೆ.

Advertisement

ಮೃತ ಧನ್ಯಾ ತನ್ನ ಕಣ್ಣುಗಳ ಚಿತ್ರವನ್ನು ಮೊಬೈಲ್‌ ವಾಟ್ಸ್‌ ಆ್ಯಪ್‌ನಲ್ಲಿ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾ
ಡಿತ್ತು. ಇದನ್ನು ಕಂಡ ಸಂತೋಷ್‌ ಎಂಬಾತ ನಾನು ಬಜರಂಗ ದಳದ ಕಾರ್ಯಕರ್ತನಿದ್ದು, “ನೀನೊಂದು ಹಿಂದೂ
ಹುಡುಗಿಯಾಗಿ ಬುರ್ಖಾ ಹಾಕಿಕೊಂಡು ಫೋಟೋ ಹಾಕಿರುವುದು ಸರಿಯಲ್ಲ’ ಎಂದೂ, ಮೂಡಿಗೆರೆಯ ಬಜರಂಗ ದಳದ ಕಾರ್ಯಕರ್ತರಿಗೆ ಮೆಸೇಜ್‌ ಮಾಡುತ್ತೇನೆ ಎಂದೂ ಹೆದರಿಸಿದ್ದ. ನಂತರ ಮೂಡಿಗೆರೆ ಬಜರಂಗದಳದ ಕಾರ್ಯಕರ್ತರಿಗೆ ಮೆಸೇಜ್‌ ಕಳುಹಿಸಿದ್ದ. ಅದನ್ನು ಕಂಡ ಅನಿಲ್‌ ಮತ್ತು ಅವಿನಾಶ್‌ ಇನ್ನಿಬ್ಬರೊಂದಿಗೆ ಆಕೆಯ ಮನೆಗೆ ತೆರಳಿ ಬುದ್ಧಿ ಹೇಳಿ ಬಂದಿದ್ದರು. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೂಡಿಗೆರೆ ಉಪ ಠಾಣಾಧಿಕಾರಿ ರಫೀಕ್‌ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಉಳಿದ ನಾಲ್ವರ ಶೋಧ ನಡೆಸುತ್ತಿದ್ದು ಆದಷ್ಟು ಬೇಗ ಅವರನ್ನೂ ಬಂಧಿಸುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next