Advertisement

ಸಚಿವ ಸ್ಥಾನ ಖಾತ್ರಿಯಾಗುತ್ತಿದ್ದಂತೆ ಅಂಗಡಿ, ಜೋಷಿ ಬೆಂಬಲಿಗರ ಸಂಭ್ರಮ

05:04 PM Jun 01, 2019 | Team Udayavani |

ಬೆಳಗಾವಿ /ಹುಬ್ಬಳ್ಳಿ : ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದು ಖಾತ್ರಿಯಾಗುತ್ತಿದ್ದಂತೆ ಸುರೇಶ್‌ ಅಂಗಡಿ ಮತ್ತು ಪ್ರಹ್ಲಾದ್‌ ಜೋಷಿ ಅವರಬೆಂಬಲಿಗರು ಸಂಭ್ರಮಾಚಾರಣೆನಡೆಸಿದ್ದಾರೆ.

Advertisement

ಬೆಳಗಾವಿಯಲ್ಲಿ ಸುರೇಶ್‌ ಅಂಗಡಿ ನಿವಾಸದ ಎದುರು ಪಟಾಕಿಗಳನ್ನುಸಿಡಿಸಿದ ಬೆಂಬಲಿಗರು ಸಿಹಿ ಹಂಚಿ ಸಂಭ್ರಮಿಸಿದರು. ಅಂಗಡಿ ಅವರ ಪತ್ನಿ ಮತ್ತು ಕುಟುಂಬಸ್ಥರು ಸಚಿವ ಸ್ಥಾನ ಸಿಕ್ಕ ಸಂಭ್ರಮದಲ್ಲಿ ತೇಲಾಡಿದರು.

ಹುಬ್ಬಳ್ಳಿಯಲ್ಲೂ ಬಿಜೆಪಿ ಕಾರ್ಯಕರ್ತರು ಸಚಿವ ಸ್ಥಾನ ಸಿಕ್ಕ ಖುಷಿಯಲ್ಲಿ ಪಟಾಕಿ ಸಿಡಿಸಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿದರು.

2014 ರಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಸುರೇಶ್‌ ಅಂಗಡಿಯವರು ಈ ಬಾರಿ ಸಂಪುಟಕ್ಕೆ ಪರಿಗಣಿಸಿದುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

ರಾಜ್ಯಕ್ಕೆ ಮೂರು ಸಚಿವ ಸ್ಥಾನಗಳು ಖಾತ್ರಿಯಾಗಿದ್ದು, ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಮತ್‌ತೊಮ್ಮೆ ಸಚಿವ ಸ್ಥಾನ ನೀಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next