Advertisement

Kalaburagi: ಇನ್ನು ಆರು ತಿಂಗಳಲ್ಲಿ ಬಿಜೆಪಿನೇ ಉಳಿಯಲ್ಲ: ಪ್ರಿಯಾಂಕ್ ಖರ್ಗೆ ಭವಿಷ್ಯ

02:53 PM Aug 14, 2023 | Team Udayavani |

ಕಲಬುರಗಿ: “ಇನ್ನು ಆರು ತಿಂಗಳಲ್ಲಿ ರಾಜ್ಯದಲ್ಲಿ, ಕೆಂದ್ರದಲ್ಲಿ ಬಿಜೆಪಿ ಉಳಿಯುವುದು ಕಷ್ಟ…. ಕಾದು ನೋಡಿ, ನಾನು ಇದಕ್ಕೆ ಗ್ಯಾರಂಟಿ ಕೊಡುತ್ತೇನೆ” ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

Advertisement

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಜನಸ್ನೇಹಿ ಅಭಿಯಾನ ಉದ್ಘಾಟನೆಗೆ ಆಗಮಿಸಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ನೋಡಿ ನಮಗೂ ರಾಜಕೀಯ ಮಾಡುವುದಕ್ಕೆ ಬರುತ್ತದೆ. ಅವರೊಬ್ಬರಿಗೆ ಮಾತ್ರ ಬರುತ್ತದೆಯಾ? ನಮಗೂ ರಾಜಕೀಯ ಮಾಡುವುದಕ್ಕೆ ಬರಲ್ವಾ? ನಾವೂ 140 ವರ್ಷ ಪಕ್ಷ ನಡೆಸಿದ್ದೇವೆ. ಹಲಾವಾರು ಬಾರಿ ದೇಶದಲ್ಲಿ, ರಾಜ್ಯದಲ್ಲುಅಧಿಕಾರ ಮಾಡಿದಿವಿ. ಅದರ ಆಧಾರದಲ್ಲಿ ಹೇಳುತ್ತೇನೆ. ಇನ್ನು ಆರು ತಿಂಗಳಲ್ಲಿ ಬಿಜೆಪಿಯಲ್ಲಿ ಎಷ್ಟು ಜನ ಉಳಿದುಕೊಳ್ಳುತ್ತಾರೆ ಅಂತಾ ಕಾದು ನೋಡಿ’ ಎಂದರು.

ನೋಡಿ… ನಮ್ಮ ಸಂಪರ್ಕದಲ್ಲಿ‌ಬಿಜೆಪಿಯವರು ಇದ್ದಾರೋ ಇಲ್ಲವೋ ಅನ್ನುವುದಕ್ಕಿಂತ ಅವರೆಷ್ಟು ಜನರೊಂದಿಗೆ ಸಂಪರ್ಕ ಹೊಂದಿದ್ದಾರೆಂದು, ಬಿಜೆಪಿಯ ನಾಯಕರ ನಡೆಯಿಂದ ಅಸಮಾಧಾನ ಇದ್ದಾರೆಂದು ಕೇಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next