Advertisement

ಹಿಮದ ಮಡಿಲಲ್ಲೂ ಬಿಜೆಪಿ ಬೆಚ್ಚಗೆ

12:55 PM May 24, 2019 | Team Udayavani |

ಈ ರಾಜ್ಯದಲ್ಲಿ ಇರುವುದು ಕೇವಲ ನಾಲ್ಕೇ ನಾಲ್ಕು ಲೋಕಸಭಾ ಕ್ಷೇತ್ರಗಳು. ಅವುಗಳೆಂದರೆ, ಕಾಂಗ್ರಾ, ಮಂಡಿ, ಹಮೀರ್‌ಪುರ್‌ ಹಾಗೂ ಶಿಮ್ಲಾ. ಈ ನಾಲ್ಕೂ ಕ್ಷೇತ್ರಗಳಲ್ಲಿ ಬಿಜೆಪಿಯೇ ಜಯಭೇರಿ ಬಾರಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಇದೇ ಸಾಧನೆ ಮಾಡಿತ್ತು.

Advertisement

ಅತಿ ದೊಡ್ಡ ಕ್ಷೇತ್ರವೆನಿಸಿರುವ ಮಂಡಿಯಲ್ಲಿ ಹಾಲಿ ಸಂಸದ ರಾಮ್‌ ಸ್ವರೂಪ್‌ ಶರ್ಮಾ ಅವರೇ ಗೆಲುವು ಪಡೆದಿದ್ದು, ಕಾಂಗ್ರೆಸ್‌ನ ಆಶ್ರೇ ಶರ್ಮಾ ವಿರುದ್ಧ ಗೆಲುವು ಪಡೆದಿದ್ದಾರೆ. ಇನ್ನು, ಮೀಸಲು ಕ್ಷೇತ್ರವಾದ ಶಿಮ್ಲಾದಲ್ಲಿ ವೀರೇಂದರ್‌ ಕಶ್ಯಪ್‌ ಜಯ ಸಾಧಿಸಿದ್ದರೆ, ಹಮೀರ್‌ಪುರ ಕ್ಷೇತ್ರದಿಂದ ಅನುರಾಗ್‌ ಸಿಂಗ್‌ ಠಾಕೂರ್‌, ಕಾಂಗ್ರಾದಿಂದ ಪಕ್ಷದ ಹಿರಿಯ ನಾಯಕ ಶಾಂತಕುಮಾರ್‌ ಜಯ ಸಾಧಿಸಿದ್ದಾರೆ.

ಮುಖ್ಯಮಂತ್ರಿ ಜೈರಾಂ ಠಾಕೂರ್‌ ಆಡಳಿತದಲ್ಲಿ ಬಿಜೆಪಿ ಮತ್ತಷ್ಟು ಬಲಗೊಂಡಿರುವುದು ಈ ಬಾರಿಯ ಚುನಾವಣೆಯಿಂದ ಸಾಬೀತಾಗಿದೆ.
2004ರ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್‌ 3 ಸ್ಥಾನ ಗೆದ್ದಿತ್ತು. ಆಗ ಬಿಜೆಪಿ 1 ಸ್ಥಾನ ಮಾತ್ರ ಗೆದ್ದಿತ್ತು. 2009ರ ಚುನಾವಣೆಯಲ್ಲಿ ಇದು ತದ್ವಿರುದ್ಧವಾಗಿತ್ತು. ಬಿಜೆಪಿ 3ರಲ್ಲಿ ಜಯ ಸಾಧಿಸಿದರೆ ಕಾಂಗ್ರೆಸ್‌ 1 ಸ್ಥಾನಕ್ಕಿಳಿದಿತ್ತು. ಆದರೆ, 2014ರಿಂದೀಚೆಗೆ ಕಾಂಗ್ರೆಸ್‌ ಒಂದು ಸ್ಥಾನ ಗೆಲ್ಲಲೂ ಆಗದಂಥ ಪರಿಸ್ಥಿತಿ ಮುಂದುವರಿದಿದೆ.

ಗೆದ್ದ ಪ್ರಮುಖರು
ರಾಮ್‌ ಸ್ವರೂಪ್‌ (ಬಿಜೆಪಿ), ಮಂಡಿ
ಅನುರಾಗ್‌ ಠಾಕೂರ್‌ (ಬಿಜೆಪಿ), ಹಮೀರ್‌ಪುರ್‌

ಸೋತ ಪ್ರಮುಖರು
ಆಶ್ರಯ್‌ ಶರ್ಮ (ಕಾಂಗ್ರೆಸ್‌), ಮಂಡಿ

Advertisement

Advertisement

Udayavani is now on Telegram. Click here to join our channel and stay updated with the latest news.

Next