Advertisement

ಮೋದಿ ಮಂತ್ರದಿಂದ ಬಿಜೆಪಿಗೆ ಗೆಲುವು: ಮಾಳವಿಕಾ

11:03 PM Apr 12, 2019 | Sriram |

ಬೆಳ್ಮಣ್‌: ದೇಶಾದ್ಯಂತ ಮೋದಿ ಮಂತ್ರ ಬಲವಾಗಿದ್ದು, ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಕಳೆದ 5 ವರ್ಷಗಳಲ್ಲಿ ನೂರಾರು ಯೋಜನೆಗಳು ಬಡವರ ಮನೆ ಬಾಗಿಲಿಗೆ ಬಂದಿರುವುದು ಮುಂದಿನ ಗೆಲುವಿಗೆ ಪೂರಕವಾಗಲಿದೆ ಎಂದು ಬಿಜೆಪಿ ನಾಯಕಿ ಮಾಳವಿಕ ಅವಿನಾಶ್‌ ಹೇಳಿದರು.

Advertisement

ಇಲ್ಲಿನ ಪೇಟೆಯಲ್ಲಿ ಬೆಳ್ಮಣ್‌ ಬಿಜೆಪಿ ಘಟಕದ ವತಿಯಿಂದ ನಡೆದ ಚುನಾವಣಾ ಪ್ರಚಾರದ ಬಹಿರಂಗ ಸಭೆೆಯಲ್ಲಿ ಮಾತನಾಡಿದರು.

ಪ್ರಧಾನಿ ಮೋದಿ ನೇತೃತ್ವದ ಸರಕಾರದ ಸಾಧನೆಗಳು ಪಕ್ಷದ ಗೆಲುವಿಗೆ ಕಾರಣಾವಾಗಲಿದೆ. ದೇಶದ ರಕ್ಷಣೆಗೆ ಅವರ ಕೈಗೊಂಡ ದಿಟ್ಟ ನಿರ್ಧಾರಗಳು, ಭ್ರಷ್ಟಾಚಾರ ನಿಯಂತ್ರಣ,ಯಶ್ವಸಿಯಾದ ಸ್ವತ್ಛ ಭಾರತದ ಕಲ್ಪನೆ ಮುಂತಾದ ಜನಪರ ಯೋಜನೆಗಳು ಬಿಜೆಪಿಯ ಕೈಹಿಡಿಯಲಿದೆ. ಇನ್ನೊಮ್ಮೆ ಮೋದಿ ಪ್ರಧಾನಿಯಾಗಬೇಕು ಎಂಬ ಆಸೆ ಈಡೇರಬೇಕಾದರೆ ಉಡುಪಿ ಚಿಕ್ಕಮಗಳೂರು ಕ್ಷೇತ್ರ ಅಭ್ಯರ್ಥಿ ಶೋಭಾ ಕರಂದ್ಲಾಜೆಯವರನ್ನು ಗೆಲ್ಲಿಸಬೇಕು ಎಂದರು. ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ವಿರೋಧ‌ ಪಕ್ಷದವರಿಗೆ ಬಲಿಷ್ಟ ದೇಶ ಬೇಕಾಗಿಲ್ಲ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಮೋದಿಯ ವಿರುದ್ದ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದರು.

ಶಾಸಕ ಸುನೀಲ್‌ ಕುಮಾರ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಮಣಿರಾಜ್‌ ಶೆಟ್ಟಿ, ನವೀನ್‌ ನಾಯಕ್‌, ಜಿ.ಪಂ. ಸದಸ್ಯೆ ರೇಶ್ಮಾ ಉದಯ ಶೆಟ್ಟಿ, ತಾ.ಪಂ ಉಪಾಧ್ಯಕ್ಷ ಗೋಪಾಲ ಮೂಲ್ಯ, ಸದಾಶಿವ ಶೆಟ್ಟಿ ಬೋಳ, ತಾ.ಪಂ. ಸದಸ್ಯೆ ಪುಷ್ಪಾ ಸತೀಶ್‌ ಪೂಜಾರಿ, ಸದಾನಂದ ಶೆಟ್ಟಿ, ಮಾಲಿನಿ ಶೆಟ್ಟಿ, ಜಯರಾಮ ಸಾಲ್ಯಾನ್‌,ಸೂರ್ಯಕಾಂತ ಶೆಟ್ಟಿ, ಬಿಜೆಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next