Advertisement

ಬಿಜೆಪಿ ಗೆಲುವಿಗೆ ದುಡ್ಡು ಕೆಲ್ಸ ಮಾಡಿದೆ: ಶಾಮನೂರು

01:38 AM May 25, 2019 | Team Udayavani |

ದಾವಣಗೆರೆ: ‘ಬಿಜೆಪಿಯವರ ಬಳಿ ಭಾರೀ ದುಡ್ಡಿದೆ. ಆ ದುಡ್ಡು ಈ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಿದೆ’ ಎಂದು ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಇಷ್ಟು ಪ್ರಮಾಣದಲ್ಲಿ ಬಿಜೆಪಿಯವರು ಗೆಲ್ಲುತ್ತಾರೆಂದು ಊಹೆ ಕೂಡ ಮಾಡಿರಲಿಲ್ಲ. ಫಲಿತಾಂಶ ಬಂದಿದೆ. ಜನಾದೇಶ ನಾವು ಒಪ್ಪಲೇಬೇಕು ಎಂದರು.

ಇನ್ನು ರಾಜ್ಯದ ಮೈತ್ರಿ ಸರ್ಕಾರದ ಉಳಿವು ಓಡಿ ಹೋಗುವವರ ಮೇಲೆ ನಿರ್ಧಾರ ಆಗಲಿದೆ. ಈಗಾಗಲೇ ಕೆಲ ಶಾಸಕರು ಬೇರೆ ಕಡೆ ಓಡಿ ಹೋಗಲು ತೀರ್ಮಾನಿಸಿದ್ದಾರೆ. ಒಂದು ವಾರ ಕಾಯ್ದು ನೋಡಬೇಕು. ಅವರು ಓಡಿ ಹೋಗ್ತಾರಾ ಅಂತ. ಸದ್ಯ ಮೈತ್ರಿ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿರಿಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಸೋಲಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿ ಸಿದ ಶಾಮನೂರು, ಜನರ ನಿರ್ಧಾರ ಏನೂ ಮಾಡಕ್ಕಾಗಲ್ಲ. ಈ ಹಿಂದೆ ಇಂದಿರಾ ಗಾಂಧಿಯೇ ಸೋತಿದ್ದರು. ಮತದಾರರ ತೀರ್ಮಾನವೇ ಅಂತಿಮ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next