Advertisement

ಇಂದಿರಾರಂತೆ ನನ್ನ ಹತ್ಯೆ: ಕೇಜ್ರಿ

08:36 AM May 19, 2019 | Team Udayavani |
ತಮಗೆ ಜೀವಭಯವಿದೆ ಎಂದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಶನಿವಾರ ಹೇಳಿಕೊಂಡಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ವರಂತೆ ನನ್ನನ್ನೂ ಕೊಲೆ ಮಾಡಿಸುವ ಸಾಧ್ಯತೆ ದಟ್ಟವಾಗಿದೆ. ಬಿಜೆಪಿ ನನ್ನ ಹಿಂದೆ ಬಿದ್ದಿದೆ. ಅವರು ನನ್ನ ಸ್ವಂತ ಭದ್ರತಾ ಅಧಿಕಾರಿಗಳ ಕೈಯಿಂದಲೇ ಒಂದು ದಿನ ನನ್ನನ್ನು ಹತ್ಯೆಗೈಯಿಸುತ್ತಾರೆ ಎಂದು ಪಂಜಾಬ್‌ನ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಕೇಜ್ರಿವಾಲ್ ಹೇಳಿದ್ದಾರೆ.

ಇದೇ ವೇಳೆ, ಕೇಜ್ರಿವಾಲ್ ಆರೋಪಕ್ಕೆ ಕಿಡಿಕಾರಿರುವ ಬಿಜೆಪಿ, ‘ಕೇಜ್ರಿವಾಲ್ ಭದ್ರತೆಯಂಥ ಗಂಭೀರ ವಿಚಾರಗಳಲ್ಲಿ ರಾಜಕೀಯ ಮಾಡುತ್ತಿದ್ದಾರೆ’ ಎಂದಿದೆ. ಅಲ್ಲದೆ, ಕೇಜ್ರಿವಾಲ್ಗೆ ತಮ್ಮ ಭದ್ರತಾ ಸಿಬಂದಿ ಬಗ್ಗೆ ಅಷ್ಟೊಂದು ಅನುಮಾನವಿದ್ದರೆ ಅವರೇಕೆ ಪೊಲೀಸರಿಗೆ ದೂರು ಕೊಟ್ಟಿಲ್ಲ ಎಂದು ಪ್ರಶ್ನಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next