Advertisement

ಚುನಾವಣೆ ಬಳಿಕ ಬಿಜೆಪಿ ಸಂಖ್ಯಾಬಲ 106ಕ್ಕೆ ಏರಿಕೆ: ಶೋಭಾ

11:25 PM May 11, 2019 | Lakshmi GovindaRaj |

ಚಿಂಚೋಳಿ: ಕುಂದಗೋಳ ಮತ್ತು ಚಿಂಚೋಳಿ ಉಪಚುನಾವಣೆ ನಂತರ ವಿಧಾನಸಭೆಯಲ್ಲಿ ಬಿಜೆಪಿ ಸಂಖ್ಯಾಬಲ 104ರಿಂದ 106ಕ್ಕೆ ಏರಿಕೆಯಾಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪಟ್ಟಣದಲ್ಲಿ ಬಿಜೆಪಿ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ ಅವರು ಹಣ ಬಲ, ಅ ಧಿಕಾರದ ಬಲದಿಂದ ಚುನಾವಣೆಯಲ್ಲಿ ಅಕ್ರಮ ಎಸಗುತ್ತಿದ್ದಾರೆ. ಆದರೆ, ಬಿಜೆಪಿ ಕಾರ್ಯಕರ್ತರು ಯಾರೂ ಖರೀದಿಗಿಲ್ಲ ಎಂದು ಕಿಡಿ ಕಾರಿದರು.

ತಮ್ಮ ಕಾರಿನಲ್ಲೇ ಪ್ರಯಾಣಿಸುವಂತೆ ಶಿವಕುಮಾರ ಆಹ್ವಾನ ನೀಡಿದ್ದಾರೆ. ನನಗೆ ಬಿಜೆಪಿ ಕಾರು ಇದೆ. ಕಾರ್ಯಕರ್ತರು ಇದ್ದಾರೆ. ನಮ್ಮ ಬದಲು ಪೊಲೀಸಿನವರೋ ಅಥವಾ ಇಂಟೆಲಿಜೆನ್ಸ್‌ನವರು ಪ್ರಯಾಣ ಬೆಳೆಸಿದರೆ ಚುನಾವಣೆಯಲ್ಲಿ ಅಕ್ರಮವಾಗಿ ಹಣ ಹಂಚುವುದನ್ನು ತಡೆಯಬಹುದು.

ರಾಜ್ಯ ಸರ್ಕಾರ ಬಿದ್ದರೆ ಅದು ಬಿಜೆಪಿಯಿಂದ ಅಲ್ಲ. ಸಿದ್ದರಾಮಯ್ಯ, ಪರಮೇಶ್ವರ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ ಅವರ ಮೇಲಾಟಗಳಿಗೆ ಸರ್ಕಾರ ಬಿದ್ದರೂ ಬೀಳಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next