Advertisement

ಬಿಜೆಪಿಗೆ ಭರ್ಜರಿ ಬಹುಮತ: ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಯೋಗಿ

07:15 PM Jan 08, 2022 | Team Udayavani |

ಲಕ್ನೋ : ಚುನಾವಣಾ ದಿನಾಂಕಗಳನ್ನು ಆಯೋಗ ಪ್ರಕಟಿಸಿದ ನಂತರ ಬಿಜೆಪಿಗೆ ಭರ್ಜರಿ ಬಹುಮತ’ ಸಿಗಲಿದೆ ಎಂದು ಶನಿವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶ್ವಾಸ ವ್ಯಕತ ಪಡಿಸಿದ್ದಾರೆ.

Advertisement

ಯೋಗಿ ಅವರು ಚುನಾವಣಾ ದಿನಾಂಕಗಳ ಘೋಷಣೆಯನ್ನು ಸ್ವಾಗತಿಸಿದ್ದಾರೆ ಮತ್ತು ಬಿಜೆಪಿ “ಅಗಾಧ ಬಹುಮತ” ದೊಂದಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಹೇಳಿದ್ದಾರೆ.

ಚುನಾವಣಾ ಆಯೋಗವು ಫೆಬ್ರವರಿ 10 ರಿಂದ ಉತ್ತರ ಪ್ರದೇಶದಲ್ಲಿ ಏಳು ಹಂತದ ಮತದಾನವನ್ನು ಘೋಷಿಸಿದ್ದು ಮತಗಳ ಎಣಿಕೆಯು ಮಾರ್ಚ್‌ ೧೦ ರಂದು ನಡೆಯಲಿದೆ.

“ನಾನು ಪ್ರಜಾಪ್ರಭುತ್ವದ ಹಬ್ಬವನ್ನು ಸ್ವಾಗತಿಸುತ್ತೇನೆ. “ಜನರ ಆಶೀರ್ವಾದ ಮತ್ತು ಡಬಲ್ ಇಂಜಿನ್ ಸರ್ಕಾರದ ಸಾಧನೆಗಳ ಆಧಾರದ ಮೇಲೆ ಬಿಜೆಪಿ ತನ್ನ ಸರ್ಕಾರವನ್ನು ಅಗಾಧ ಬಹುಮತದೊಂದಿಗೆ ರಚಿಸುತ್ತದೆ” ಎಂದು ಆದಿತ್ಯನಾಥ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next