Advertisement

ರಸ್ತೆ ಅಪಘಾತ: ಗಂಭೀರ ಗಾಯಗೊಂಡ ಬಿಜೆಪಿ ಸಂಸದ ಆಸ್ಪತ್ರೆಗೆ ದಾಖಲು

09:42 AM Nov 11, 2019 | keerthan |

ಹೊಸದಿಲ್ಲಿ: ರಸ್ತೆ ಅಪಘಾತವೊಂದರಲ್ಲಿ ಬಿಜೆಪಿ ಸಂಸದ ತಿರಾತ್ ಸಿಂಗ್ ರಾವತ್ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉತ್ತರಾಖಂಡ್ ನ ಭೀಮ್ ಗೋಡಾ – ಪಂತ್ ನಲ್ಲಿ ರವಿವಾರ ನಡೆದಿದೆ.

Advertisement

ಗರ್ವಾಲ್ ಕ್ಷೇತ್ರದ ಸಂಸದರಾಗಿರುವ ರಾವತ್, ಇಂದು ಮುಂಜಾನೆ ಹರಿದ್ವಾರ ರೈಲ್ವೇ ನಿಲ್ದಾಣದಲ್ಲಿ ಬಂದಿಳಿದಿದ್ದರು. ನಂತರ ಅಲ್ಲಿಂದ ಕಾರಿನಲ್ಲಿ ತಮ್ಮ ಡ್ರೈವರ್ ಮತ್ತು ಅಂಗರಕ್ಷಕನ ಜೊತೆ ಪೌರಿಗೆ ಪ್ರಯಾಣ ಬೆಳೆಸಿದ್ದರು.

ರಸ್ತೆ ಮಾರ್ಗದಲ್ಲಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಸಂಸದರಿದ್ದ ಕಾರು ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ ಎಂದು ವರದಿಐಆಗಿದೆ.

ತಕ್ಷಣ ಸಂಸದ ರಾವತ್ ರನ್ನು ಸ್ಥಳಿಯ ಆಸ್ಪತ್ರಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗೆ ದೆಹಲಿಯ ಏಮ್ಸ್ ಗೆ ಕರೆದುಕೊಂಡು ಬರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next