Advertisement

Karnataka ಮತ್ತೆ ಆಪರೇಷನ್ ಕಮಲ; ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್

08:58 PM Oct 27, 2023 | Team Udayavani |

ದಾವಣಗೆರೆ: ರಾಜ್ಯದ ನಾಲ್ಕೂ ದಿಕ್ಕುಗಳಿಂದ ಆಪರೇಷನ್ ಕಮಲ ಪ್ರಾರಂಭವಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ಗೌಡ(ರವಿ ಗಾಣಿಗ ) ತಿಳಿಸಿದ್ದಾರೆ.

Advertisement

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್ ನೀಡಲಾಗುತ್ತಿದೆ. ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆದೊಯ್ದುತ್ತೇವೆ. ಅಲ್ಲಿ ಗೃಹ ಸಚಿವರಾದ ಅಮಿತ್ ಶಾ, ಮುಖಂಡರನ್ನು ಭೇಟಿ ಮಾಡಿಸುತ್ತೇವೆ. ಮಂತ್ರಿಗಿರಿ ಕೊಡುತ್ತೇವೆ ಎಂಬ ಆಮಿಷಗಳ ಒಡ್ಡಲಾಗುತ್ತಿದೆ. ಆಪರೇಷನ್ ಕಮಲಕ್ಕೆ ಯಾರು ಯಾರು ಓಡಾಡುತ್ತಿದ್ದಾರೆ. ಅವರ ವಿಡಿಯೋ, ಆಡಿಯೋ ಸಹ ಇದೆ. ಸೂಕ್ತ ಸಮಯದಲ್ಲಿ ಮಂಡ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಮತ್ತೆ ಆಪರೇಷನ್ ಕಮಲದ ಪ್ರಯತ್ನದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತರಲಾಗಿದೆ. ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸೂಕ್ತ ಸಂದರ್ಭದಲ್ಲಿ ದಾಖಲೆಗಳ ಬಿಡುಗಡೆ ಮಾಡಲಾ ಗುವುದು. ಯಾರು ಏನೇ ಆಮಿಷವೊಡ್ಡಿದರೂ ನಮ್ಮ ಶಾಸಕರು ಬಲಿಯಾಗುವವರಲ್ಲ ಎಂದು ದೃಢ ವಿಶ್ವಾಸ ವ್ಯಕ್ತಪಡಿಸಿದರು.

ಯಾರು ಈ ಹಿಂದೆ ಕಾಂಗ್ರೆಸ್ ಜೆಡಿಎಸ್ ಸರ್ಕಾರವನ್ನ ತೆಗೆದರೋ ಅದೇ ತಂಡ ಮತ್ತೆ ಸಕ್ರಿಯವಾಗಿದೆ. ನಮ್ಮ ಪಕ್ಷದ ನಾಲ್ವರು ಶಾಸಕರನ್ನು ಆ ತಂಡ ಭೇಟಿ ಮಾಡಿರುವ ಬಗ್ಗೆ ಎಲ್ಲ ದಾಖಲೆಗಳಿವೆ. ಕೆಲವರಿಗೆ ಕೆಲಸ ಇಲ್ಲ. ಹಾಗಾಗಿ ಸರ್ಕಾರವನ್ನ ಬೀಳಿಸುತ್ತೇವೆ ಎಂದು ಓಡಾಡುತ್ತಿದ್ದಾರೆ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪಿಎ ಆಗಿದ್ದವರು, ನಮ್ಮ ಮಂಡ್ಯ ಭಾಗದವರು, ಉತ್ತರ ಕರ್ನಾಟಕದ ಒಬ್ಬ ಎಕ್ಸ್ ಫರ್ಟ್ ಹೀಗೆ ಕೆಲವರು ಓಡಾಡುತ್ತಿದ್ದಾರೆ. ಸೂಕ್ತ ಸಮಯ ಬಂದಾಗ ಎಲ್ಲ ವಿಡಿಯೋ, ಆಡಿಯೋ ದಾಖಲೆಗಳನ್ನು ಮಾಧ್ಯಮದ ಮುಂದಿಡುತ್ತೇವೆ ಎಂದು ತಿಳಿಸಿದರು.

Advertisement

ಹೊಸಬರು, ಹಳೆಯ ಶಾಸಕರನ್ನು ಭೇಟಿ ಮಾಡಿದ್ದಾರೆ. ಒಟ್ಟು ನಾಲ್ಕು ಜನ ಶಾಸಕರನ್ನ ಭೇಟಿ ಮಾಡಿದ್ದಾರೆ. ಅವರು ನಮ್ಮ ಗೆಳೆಯರು, ಪ್ರಾಮಾಣಿಕರು ಎಲ್ಲ ನಮಗೆ ಹೇಳಿದ್ದಾರೆ. ಅವರು ಯಾರೂ ಎಂಬುದನ್ನು ಹೇಳುವುದಿಲ್ಲ. ನಾನು, ಚನ್ನಗಿರಿ ಶಾಸಕರು ಪಕ್ಷಕ್ಕೆ ಬದ್ಧರು. ಹಾಗಾಗಿ ನಮ್ಮಂತಹವರ ಭೇಟಿ ಮಾಡುವುದಿಲ್ಲ ಎಂದು ತಿಳಿಸಿದರು.

ಮುಂದೆ ಎರಡೂವರೆ ವರ್ಷ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುತ್ತಾರೆ. ಅವರು ಮುಖ್ಯಮಂತ್ರಿ ಆಗುವುದು ಗ್ಯಾರಂಟಿ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದವರು ಮುಖ್ಯಮಂತ್ರಿ ಆಗಲೇ ಬೇಕು. ಹೈಕಮಾಂಡ್ ಮಟ್ಟದಲ್ಲಿ ಏನಾಗಿದಿಯೋ ಗೊತ್ತಿಲ್ಲ. ಕಾಲ ಬಂದಾಗ ಎಲ್ಲವೂ ನಿರ್ಣಯ ಆಗುತ್ತದೆ ಎಂದು ತಿಳಿಸಿದರು. ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಸಹ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗು ವರು ಎಂದು ಧ್ವನಿಗೂಡಿಸಿದರು.

ಶಾಸಕ ಬಸವರಾಜ ಶಿವಗಂಗಾ ಮಾತನಾಡಿ, ಅಽಕಾರದ ದಾಹದಿಂದ ಬಿಜೆಪಿಯವರು ಮತ್ತೆ ಶಾಸಕರ ಖರೀದಿಸುವ ಪರಿಪಾಠ ಮುಂದುವರಿಸಿದ್ದಾರೆ. ನಮ್ಮ ಶಾಸಕರಿಗೆ ೫೦ ಕೋಟಿಯ ಆಮಿಷವೊಡ್ಡಿದ್ದಾರೆ. ಒಳ್ಳೆಯ ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಸೆ ಸಹ ತೋರಿಸಿದ್ದಾರೆ. ಇದನ್ನು ಮುಖ್ಯಮಂತ್ರಿಮ ಉಪ ಮುಖ್ಯಮಂತ್ರಿಗಳ ಗಮನಕ್ಕೂ ತರಲಾಗಿದೆ. ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next