Advertisement

ಸಚಿವ, ಶಾಸಕರ ರಾಜೀನಾಮೆಗೆ ಬಿಜೆಪಿ ಪಂಜಿನ ಮೆರವಣಿಗೆ

05:13 PM Sep 19, 2020 | mahesh |

ಕುಂಬಳೆ: ವಂಚನೆ ಹಗರಣದ ಆರೋಪ ಎದುರಿಸುತ್ತಿರುವ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್‌ ಮತ್ತು ಚಿನ್ನ ಕಳ್ಳ ಸಾಗಾಣಿಕೆ ಆರೋಪದ ಕೇರಳ ಶಿಕ್ಷಣ ಸಚಿವ ಕೆ.ಟಿ. ಜಲೀಲ್‌ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವರ್ಕಾಡಿ ಪಂಚಾಯತ್‌ ಸಮಿತಿ ನೇತೃತ್ವದಲ್ಲಿ ಮಜೀರ್ಪಳ್ಳದಲ್ಲಿ ಪಂಜಿನ ಮೆರವಣಿಗೆ ನಡೆಸಲಾಯಿತು.

Advertisement

ಕಾರ್ಯಕ್ರಮವನ್ನು ಬಿಜೆಪಿ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು. ಬಿಜೆಪಿ ಪಂಚಾಯತ್‌ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ, ಯಾದವ ಬಡಾಜೆ, ಅಬ್ದುಲ್ಲ ಪಿ.ಎಂ. ದೂಮಪ್ಪ ಶೆಟ್ಟಿ, ಸದಾಶಿವ ನಾಯ್ಕ, ಅನಂದ ತಚ್ಚಿರೆ, ವಸಂತ ಎಸ್‌., ಸದಾಶಿವ ಯು., ಪ್ರಜ್ವಿತ್‌ ಸುಳ್ಯಮೆ, ರಕ್ಷಣ್‌ ಅಡೇಕಳ ಕಟ್ಟೆ, ಜಗದೀಶ ಚೆಂಡೇಲ್‌ ನೇತೃತ್ವ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next