Advertisement

ಕುಂಬಳೆ: ಉಪ್ಪಳ ನಯಾಬಜಾರ್‌ನಲ್ಲಿ ಪ್ರತಿಭಟನೆ

08:21 PM Sep 16, 2020 | mahesh |

ಕುಂಬಳೆ: ಅಕ್ರಮ ಚಿನ್ನ ಕಳ್ಳಸಾಗಣೆಯ ಪ್ರಕರಣದ ತನಿಖೆಗೆ ಒಳಗಾಗಿರುವ ಕೇರಳ ಸರಕಾರದ ಮಂತ್ರಿ ಕೆ.ಟಿ. ಜಲೀಲ್‌ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಮತ್ತು ತಿರುವನಂತಪುರಂನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಯುವಮೋರ್ಚ ನೇತಾರರ, ಕಾರ್ಯಕರ್ತರ ಮೇಲೆ ಪೊಲೀಸರು ನಡೆಸಿದ ಲಾಠಿಚಾರ್ಜ್‌ನ್ನು ಖಂಡಿಸಿ ಬಾಯಾರು ಕೈಕಂಬದಿಂದ ನಯಾಬಜಾರ್‌ ತನಕ ಮಂಗಲ್ಪಾಡಿ ಬಿಜೆಪಿ ಮತ್ತು ಯುವಮೋರ್ಚಾ ಸಮಿತಿ ವತಿಯಿಂದ ಪ್ರತಿಭಟನೆ ಮೆರವಣಿಗೆ ನಡೆಯಿತು.

Advertisement

ಪಂಚಾಯತ್‌ ಸಮಿತಿ ಅಧ್ಯಕ್ಷ ವಸಂತ್‌ ಕುಮಾರ್‌ ಮಯ್ಯ ಅಧ್ಯಕ್ಷತೆ ವಹಿಸಿದರು. ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್‌ ಐಲ್‌ ಉದ್ಘಾಟಿಸಿದರು.

ಯುವಮೋರ್ಚ ಮಂಡಲಾಧ್ಯಕ್ಷ ಚಂದ್ರಕಾಂತ್‌ ಶೆಟ್ಟಿ, ಉಪಾಧ್ಯಕ್ಷ ಯತೀಶ್‌ ಭಂಡಾರಿ, ಕಿಶೋರ್‌ ಭಗವತಿ, ಬಿಜೆಪಿ ನೇತಾರಾದ ಸುರೇಶ್‌ ಶೆಟ್ಟಿ ಹೇರೂರು, ರಂಜಿತ್‌ ಶಾರದಾನಗರ, ಉದಯ ಐಲ್‌, ಸುರೇಶ್‌ ಕೆ.ಕೆ. ಮುಟ್ಟಂ, ಜಯರಾಜ್‌ ಬಂದಿಯೋಡ್‌, ಅವಿನಾಶ್‌ ಪ್ರತಾಪನಗರ, ನಿಖೀಲ್‌ ರಾಜ್‌, ದೀಕ್ಷಿತ್‌ ಐಲ್‌, ಧನುಶ್‌ ಹೇರೂರು, ದಿನೇಶ್‌ ಚೆರುಗೋಳಿ, ದಿನೇಶ್‌ ಮುಳಿಂಜ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next