Advertisement

ವಿಧಾನಸಭೆಯಲ್ಲಿ ನಮಾಜ್‌ಗೆ ಪ್ರತ್ಯೇಕ ರೂಂ : ಜಾರ್ಖಂಡ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

07:55 PM Sep 06, 2021 | Team Udayavani |

ರಾಂಚಿ: ನಮಾಜ್‌ ಮಾಡುವುದಕ್ಕೆ ವಿಧಾನಸಭೆಯಲ್ಲಿ ಕೋಣೆಯೊಂದನ್ನು ಬಿಟ್ಟು ಕೊಟ್ಟಿರುವ ಜಾರ್ಖಂಡ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿದೆ.

Advertisement

ಅಧಿವೇಶನ ಆರಂಭಕ್ಕೂ ಮೊದಲು ಬಿಜೆಪಿ ನಾಯಕರು ಮೆಟ್ಟಿಲ ಮೇಲೆ ಕುಳಿತು ಹನುಮಾನ್‌ ಚಾಲೀಸಾ ಪಠಿಸಿ, ಘೋಷಣೆಗಳನ್ನು ಕೂಗಿದರು.

ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಸದನದ ಬಾವಿಗಿಳಿದು ಜೈ ಶ್ರೀ ರಾಮ್‌ ಘೋಷಣೆ ಕೂಗಿದ್ದಾರೆ. ನಮಾಜ್‌ಗೆ ಕೊಠಡಿ ಕೊಟ್ಟಂತೆ ಹನುಮಾನ್‌ ದೇಗುಲ ನಿರ್ಮಿಸಬೇಕು, ಬೇರೆ ಧರ್ಮದವರಿಗೂ ಪ್ರಾರ್ಥನಾ ಕೊಠಡಿ ನಿರ್ಮಿಸಬೇಕು ಎಂದು ಒತ್ತಾಯಿಸಲಾಗಿದೆ.

ರಾಜ್ಯದ ಹಲವು ಸ್ಥಳಗಳಲ್ಲಿ ಬಿಜೆಪಿ ಕಾರ್ಯಕರ್ತರು ಸಿಎಂ ಹೇಮಂತ್‌ ಸೊರೇನ್‌, ಸಭಾಧ್ಯಕ್ಷ ರವೀಂದ್ರ ನಾಥ್‌ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ :ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾದ ಸಚಿವೆ ಶಶಿಕಲಾ ಜೊಲ್ಲೆ

Advertisement
Advertisement

Udayavani is now on Telegram. Click here to join our channel and stay updated with the latest news.

Next