Advertisement

ಈ ಪರಿಸ್ಥಿತಿಯಲ್ಲಿ ಸಿಎಂಗೆ ವಿದೇಶ ಪ್ರವಾಸ ಬೇಕೆ?; ಬಿಜೆಪಿ ಪ್ರಶ್ನೆ

09:22 AM Dec 29, 2018 | Team Udayavani |

ಬೆಂಗಳೂರು: ಹೊಸ ವರ್ಷಾಚರಣೆ  ವೇಳೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಿರುವ ಬಗ್ಗೆ ರಾಜ್ಯ ಬಿಜೆಪಿ ಆಕ್ರೋಶ ಹೊರ ಹಾಕಿದೆ.ಟ್ವೀಟ್‌ ಮೂಲಕ ಸಿಎಂ ಅವರ ಸಿಂಗಾಪುರ ಪ್ರವಾಸವನ್ನು ಟೀಕಿಸಲಾಗಿದೆ.

Advertisement

ಹೊಸ ಸರ್ಕಾರ ರಚಿಸಿದ ಬಳಿಕ 377 ರೈತರು ಜೀವ ಕಳೆದುಕೊಂಡಿದ್ದಾರೆ. 156 ತಾಲೂಕುಗಳು ಬರ ಪೀಡಿತ ಎಂದು ಘೋಷಿಸಲಾಗಿದೆ. ಸಾಲ ಮನ್ನಾ ಇದುವರೆಗೂ ಮಾಡಿಲ್ಲ. ಕರ್ನಾಟಕ ರಾಜ್ಯ ಸಾಲದ ಸುಳಿಗೆ ಸಿಲುಕಿದೆ. ಇಂತಹುದುರಲ್ಲಿ ಮಣ್ಣಿನ ಮಗ ಎಂದು ಕರೆಸಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಿಂಗಾಪುರದಲ್ಲಿ ಹೊಸವರ್ಷಾಚರಣೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next