Advertisement

BJP ನಿರ್ನಾಮದ ಹಂತಕ್ಕೆ: ಐವನ್‌ ಡಿ’ಸೋಜಾ

11:49 PM Aug 19, 2023 | Team Udayavani |

ಮಂಗಳೂರು: ರಾಜ್ಯದಲ್ಲಿ ಬಿಜೆಪಿ ಆಂತರಿಕ ಸಮಸ್ಯೆಯಿಂದ ಕಂಗಾ ಲಾಗಿದ್ದು ನಿರ್ನಾಮವಾಗುವ ಹಂತಕ್ಕೆ ತಲುಪಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವನ್‌ ಡಿ’ಸೋಜಾ ಹೇಳಿದರು.

Advertisement

ಹಾಗಾಗಿ ವಿಪಕ್ಷ ನಾಯಕನನ್ನು ಆರಿಸಲು ಇಂದಿಗೂ ಸಾಧ್ಯವಾಗಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಬಿಜೆಪಿ ಸರಕಾರದ ಅವ ಧಿಯ ಭ್ರಷ್ಟಾಚಾರದ ತನಿಖೆ ನಡೆ ಸಲು ನ್ಯಾ| ನಾಗಮೋಹನ್‌ ದಾಸ್‌ ನೇತೃತ್ವದ ಸಮಿತಿ ರಚಿಸಲಾಗಿದ್ದು, ಶೀಘ್ರ ಎಲ್ಲ ಅವ್ಯವಹಾರಗಳು ಬಹಿ ರಂಗವಾಗಲಿವೆ ಎಂದರಲ್ಲದೇ, ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಗೆ ಜನರಿಂದ ಉತ್ತಮ, ಪ್ರತಿಕ್ರಿಯೆ ಲಭಿಸಿದೆ ಎಂದರು.

ಅಳಪೆ ಗ್ರಾಮದಲ್ಲಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಇಬ್ಬರು ಯುವಕರ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಲ್ಲಿ ತಲಾ 2 ಲಕ್ಷ ರೂ. ಮಂಜೂರಾಗಿದೆ. ಉಳಿ ದಂತೆ ಅನಾರೋಗ್ಯ ಪೀಡಿತ 11 ಮಂದಿಯ ಚಿಕಿತ್ಸೆಗೆ 9.25 ಲಕ್ಷ ರೂ. ಮಂಜೂರಾಗಿದೆ ಎಂದರು. ವೆನಾÉಕ್‌ ಆಸ್ಪತ್ರೆಯ ಸಮಸ್ಯೆ ಕುರಿ ತಂತೆ ಟೀಕೆ ಮಾಡುವ ಶಾಸಕರು, ತಮ್ಮ ಹೊಣೆಗಾರಿಕೆ ಮರೆತು ಮಾತನಾ ಡುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಮುಖರಾದ ಪ್ರವೀಣ್‌ ಚಂದ್ರ ಆಳ್ವ ಭಾಸ್ಕರ ರಾವ್‌ ಮತ್ತಿತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next