Advertisement

ಆರು ತಿಂಗಳುಗಳಲ್ಲಿ ಮಹಾದಾಯಿ ಇತ್ಯರ್ಥ: ಶಾ

07:40 AM May 07, 2018 | Team Udayavani |

ರಾಮದುರ್ಗ: ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ 6 ತಿಂಗಳುಗಳಲ್ಲಿ ಮಹಾದಾಯಿ ವಿವಾದ ಇತ್ಯರ್ಥ ಗೊಳಿಸಿ ಈ ಭಾಗದ ರೈತರ ಬಹುದಿನಗಳ ಸಮಸ್ಯೆ ಬಗೆಹರಿಸಲಾಗುವುದು ಎಂದು ಅಮಿತ್‌ ಶಾ ಭರವಸೆ ನೀಡಿದರು.

Advertisement

ಬಿಜೆಪಿ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಹಾದಾಯಿ ವಿಷಯದಲ್ಲಿ ಸಿದ್ದರಾಮಯ್ಯ ಸರಕಾರ ಆಸಕ್ತಿ ವಹಿಸದ ಕಾರಣ ನನೆಗುದಿಗೆ ಬಿದ್ದಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಪಾಕಿಸ್ಥಾನದ ವಿಚಾರಗಳು ಒಂದೇ ಆಗಿವೆ. ರಾಜ್ಯದ ಮಹಾನ್‌ ವ್ಯಕ್ತಿಗಳ ಜಯಂತಿಗಳನ್ನು ಆಚರಣೆ ಮಾಡದ ಸಿದ್ದರಾಮಯ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಮಾಡಿ ಪಾಕಿಸ್ಥಾನದಿಂದ ಅಭಿನಂದನಾ ಟ್ವೀಟ್‌ಗಳನ್ನು ಪಡೆಯುತ್ತಿದೆ. ರಾಜ್ಯದಲ್ಲಿ ರಾಹುಲ್‌ ಗಾಂಧಿ  ಅವರು ಸಿದ್ದರಾಮಯ್ಯ ಅವರನ್ನು ಗೆಲ್ಲಿಸುತ್ತೇನೆಂದು ಹೇಳಿಕೊಳ್ಳುತ್ತ ತಿರುಗುತ್ತಿದ್ದಾರೆ. ಚುನಾವಣೆ ಅಂಗಳ ದಿಂದ ಓಡಿ ಹೋದವರು ಯಾರನ್ನು ಗೆಲ್ಲಿಸಲು ಸಾಧ್ಯ? ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಖಚಿತ ಎಂಬ ಭೀತಿಯಲ್ಲಿ ಬಾದಾಮಿಗೆ ಬಂದಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next