Advertisement

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಶುರು: ಕಾರ್ಯವೈಖರಿ ಪರಾಮರ್ಶೆ

06:25 AM Sep 25, 2017 | Team Udayavani |

ನವದೆಹಲಿ: ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಭಾನುವಾರ ಆರಂಭವಾಗಿದೆ. ಪಕ್ಷದ ಅಧ್ಯಕ್ಷ ಅಮಿತ್‌ ಶಾ, ವಿವಿಧ ರಾಜ್ಯಗಳಲ್ಲಿ ಪಕ್ಷದ ಕಾರ್ಯವೈಖರಿಯ ಪರಾಮರ್ಶೆ ನಡೆಸಿದ್ದಾರೆ. 

Advertisement

ಉದ್ಘಾಟನೆ ಬಳಿಕ ವಿವಿಧ ರಾಜ್ಯಗಳ ಮುಖ್ಯಸ್ಥರ ಜತೆ ಸಭೆ, ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಪ್ರಧಾನಿಯವರ ಸ್ವತ್ಛ ಭಾರತ ಯೋಜನೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಅಂತಿಮ ದಿನವಾಗಿರುವ ಸೋಮವಾರ ಅಂಗೀಕರಿಸಬೇಕಾಗಿರುವ ನಿರ್ಣಯಗಳನ್ನು ಶಾ ಪರಿಶೀಲಿಸಿದರು. ಅದೇ ದಿನ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಅವರು ವಿದ್ಯುತ್‌, ಗೃಹ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next