Advertisement

ಒಂದು ಮತದ ಗೆಲುವಿನ ಸರದಾರ ನಾಥದ್ವಾರ ಬಿಜೆಪಿ ಶಾಸಕ ನಿಧನ

11:51 AM Feb 21, 2018 | udayavani editorial |

ಜೈಪುರ : 2008ನ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ  ಅಂದಿನ ಪ್ರದೇವ್‌ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಸಿ ಪಿ ಜೋಶಿ ಅವರನ್ನು ಕೇವಲ ಒಂದು ಮತದಿಂದ ಸೋಲಿಸಿ ದೇಶಾದ್ಯಂತ ಸುದ್ದಿಯಾಗಿದ್ದ ಬಿಜೆಪಿ ಶಾಸಕ ಕಲ್ಯಾಣ್‌ ಸಿಂಗ್‌ ಚೌಹಾಣ್‌ ಅವರು ದೀರ್ಘ‌ಕಾಲದ ಅಸ್ವಾಸ್ಥ್ಯದ ಬಳಿಕ ಇಂದು ಉದಯಪುರದಲ್ಲಿ ನಿಧನಹೊಂದಿದರು.  ಅವರಿಗೆ 58 ವರ್ಷ ಪ್ರಾಯವಾಗಿತ್ತು. 

Advertisement

ಉದಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಚೌಹಾಣ್‌ ಅವರು ಇಂದು ನಸುಕಿನ ವೇಳೆ ಕೊನೆಯುಸಿರೆಳೆದರೆಂದು ಪಕ್ಷದ ವಕ್ತಾರ ತಿಳಿಸಿದ್ದಾರೆ. 

ರಾಜಸಮಂದ್‌ ಜಿಲೆಲಯ ನಾಥದ್ವಾರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಚೌಹಾಣ್‌ ಅವರು ಪತ್ನಿ, ನಾಲ್ವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ  ಇಂದು ನಾಥದ್ವಾರ ಸಮೀಪದ ದಾಗ್‌ವಾಡ ಗ್ರಾಮದಲ್ಲಿ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next