Advertisement

ದೇಶದಲ್ಲಿನ ಅಕ್ರಮ ವಲಸಿಗರ ಗಡೀಪಾರು: ಲೋಕಸಭೆಯಲ್ಲಿ ಬಿಜೆಪಿ ಆಗ್ರಹ

03:33 PM Apr 11, 2017 | Team Udayavani |

ಹೊಸದಿಲ್ಲಿ : ಸಮಾಜ ವಿರೋಧಿ ಹಾಗೂ ಭಯೋತ್ಪಾದಕ ಚಟುವಟಿಕೆಗಳಲ್ಲಿ ಶಾಮೀಲಾಗಿರುವ ದೇಶಾದ್ಯಂತದ ಕಾನೂನುಬಾಹಿರ ವಲಸಿಗರನ್ನು ದೇಶದಿಂದ ಹೊರಗಟ್ಟಬೇಕು ಎಂದು ಇಂದು ಲೋಕಸಭೆಯಲ್ಲಿ ಬಿಜೆಪಿ ಸದಸ್ಯ ನಿಶಿಕಾಂತ್‌ ದುಬೆ ಆಗ್ರಹಿಸಿದರು. 

Advertisement

ದುಬೆ ಅವರ ಈ ಒತ್ತಾಯ ಸದನದಲ್ಲಿ  ಭಾರೀ ಗದ್ದಲ ಗಲಾಟೆಗೆ ಕಾರಣವಾಯಿತು. 

ದೇಶದಲ್ಲಿ  ಬಾಂಗ್ಲಾದೇಶ ಮೊದಲಾದೆಡೆಗಳಿಂದ ಭಾರತಕ್ಕೆ ಅಕ್ರಮವಾಗಿ ಬಂದಿರುವ ವಲಸಿಗರನ್ನು ಗುರುತಿಸಲು ಆಯೋಗವೊಂದನ್ನು ರಚಿಸಬೇಕು. ಇದರಿಂದ ದೇಶದ ವಿವಿಧೆಡೆ, ಮುಖ್ಯವಾಗಿ ಈಶಾನ್ಯ ಭಾರತದಲ್ಲಿ, ಜನಸಂಖ್ಯಾ ನಮೂನೆಯಲ್ಲಿ ಬದಲಾವಣೆ ಆಗಿರುವುದನ್ನು  ಪತ್ತೆ ಹಚ್ಚಿ ಕಠಿನ ಕ್ರಮತೆಗೆದುಕೊಳ್ಳಬೇಕು ಎಂದು ದುಬೆ ಸೂಚಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next